ಫೇಸ್ಬುಕ್ ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ; ದೂರು ದಾಖಲು

Source: sonews | By Staff Correspondent | Published on 27th July 2018, 11:57 PM | Coastal News | Don't Miss |

ಮೂಡುಬಿದಿರೆ: ದುಬೈನ ಅಬುಧಾಬಿಯಲ್ಲಿದ್ದುಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಈ ಹಿಂದೆ ವ್ಯಕ್ತಿಗಳ ವೈಯಕ್ತಿಕ ಮಾನಹಾನಿ ನಡೆಸುತ್ತಿದ್ದ ಆರೋಪಿಯು ಇದೀಗ ಹಿಂದೂ ದೇವತೆಗಳ ಅರೆನಗ್ನ ಚಿತ್ರಗಳನ್ನು ಪೇಸ್‌ಬುಕ್‌ನಲ್ಲಿ ಹಾಕಿದ್ದಲ್ಲದೆ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವ ಬಗ್ಗೆ ದೂರು ದಾಖಲಾಗಿದೆ.

 

ಸುಳ್ಯ ತಾಲೂಕಿನ ಮುರಳಿ ಗ್ರಾಮದ ನಿವಾಸಿ ಇಬ್ರಾಹಿಂ ಖಲೀಲ್ ಎಂಬಾತ ಪ್ರಕರಣದ ಆರೋಪಿ. ಸದ್ಯ ಈತ ದುಬೈನ ಅಬುಧಾಬಿಯಲ್ಲಿ ನೆಲೆಸಿದ್ದು, ಈ ಹಿಂದೆ ಈತ ಹಿಂದೂ-ಮುಸ್ಲಿಂ ವ್ಯಕ್ತಿಗಳ ಹೆಸರಿನ ಸಹಿತ ಹಲವು ನಕಲಿ ಪೇಸ್‌ಬುಕ್ ಖಾತೆ ತೆರೆದು ಕೋಮು ಪ್ರಚೋದನಕಾರಿ ಸಂದೇಶ ರವಾನಿಸುತ್ತಿದ್ದ ಎಂದು ಈ ಬಗ್ಗೆ ಮೂಡುಬಿದಿರೆ ಪೋಲಿಸ್ ಠಾಣೆ, ಸೈಬರ್ ಕ್ರೈಂ ಠಾಣೆ ಸಹಿತ ಹಲವು ಕಡೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆರೋಪಿಯು ದೂರುದಾರರಾಗಿದ್ದ ಲತೀಫ್ ಎಂಬವರ ತಂದೆಯ ಚಿತ್ರವನ್ನೇ ಬಳಸಿಕೊಂಡು, ದೂರು ಹಿಂಪಡೆಯದಿದ್ದಲ್ಲಿ ಇನ್ನಷ್ಟು ತೊಂದರೆ ಕೊಡುವುದಾಗಿ ಬೆದರಿಸಿದ್ದ ಮಾತ್ರವಲ್ಲ ಕರೆ ಮಾಡಿ ನಿನ್ನನ್ನು ಮುಗಿಸಲು ಡೀಲ್ ನೀಡಿರುವುದಾಗಿ ಬೆದರಿಸಿದ್ದ ಎಂದು ದೂರಲಾಗಿದೆ.

ಆರೋಪಿಯು ವಿರೂಪಗೊಳಿಸಿರುವ ಹಿಂದೂ ದೇವತೆಗಳ ಚಿತ್ರವನ್ನು ಮತ್ತು ಅವಹೇಳನಕಾರಿಯಾಗಿ ಪ್ರಕಟಿಸಿರುವ ಬರಹಗಳನ್ನು ದೂರುದಾರ ಲತೀಫ್ ಹೆಸರಿನ ನಕಲಿ ಖಾತೆಗೂ ಶೇರ್ ಮಾಡಿದ್ದು ಹಿಂದೂಗಳು ಲತೀಫ್ ಅಂಗಡಿಗೆ ಹೋಗಬೇಡಿ ಎಂದು ಕಥೆಕಟ್ಟಿದ್ದಾನೆ. ಮಾತ್ರವಲ್ಲ ಹಿಂದೂ ದೇವತೆಗಳ ಕೈಯಲ್ಲಿರುವ ಆಯುಧಗಳ ಮೂಲಕ ಸಿಕ್ಸ್ ಬಾರಿಸಬಹುದು ಎಂದಿದ್ದಾನೆ. ಜೊತೆಗೆ ಬೇರೆ ಖಾತೆಗಳಲ್ಲಿ ಮುಸ್ಲಿಂ ಧರ್ಮದ ಬಗ್ಗೆಯೂ ಅವಹೇಳನ ಬರಹ ಬರೆದಿದ್ದು, ದರ್ಗಾಗಳನ್ನು ಉಚಿತವಾಗಿ ನೆಲಸಮ ಮಾಡಲು ನಾನಿದ್ದೇನೆ ಎಂದಿದ್ದಾನೆ.

ಕಮೀಷನರ್‌ನಿಂದ ಕ್ರಮದ ಭರವಸೆ

ಪ್ರಕರಣದ ಬಗ್ಗೆ ಮೂಡುಬಿದಿರೆ ಲತೀಫ್ ಸಹಿತ ಹಲವು ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಲತೀಫ್ ಖುದ್ದು ಮಂಗಳೂರು ಕಮಿಷನರ್‌ನ್ನು ಭೇಟಿಯಾಗಿ ದೂರು ನೀಡಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದು, ಈಗಾಗಲೇ ಈತನ ಹಲವು ನಕಲಿ ಖಾತೆಗಳನ್ನು ಸೈಬರ್ ಕ್ರೈಂ ಪೋಲಿಸರು ಪತ್ತೆ ಹಚ್ಚಿದ್ದು, ಈತನ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...