ಶಿರಸಿ: ಲಾರಿ ಮತ್ತು ಬೈಕ್ ಅಪಘಾತ; ಗ್ರಾ.ಪಂ.ಅಧ್ಯಕ್ಷ ಸೇರಿದಂತೆ ಇಬ್ಬರ ಸಾವು
ಶಿರಸಿ: ತಾಲೂಕಿನ ಬನವಾಸಿ ಬಳಿಯ ಸೊರಬ್ ರಸ್ತೆಯಲ್ಲಿ ಲಾರಿ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗುಡ್ನಾಪುರ ಗ್ರಾ.ಪಂ.ಅಧ್ಯಕ್ಷ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಗುಡ್ನಾಪುರ ಪಂಚಾಯತ್ ಅಧ್ಯಕ್ಷ ಅಣ್ಣಾಜಿ ಮಯೂರ್ ಗೌಡ(40) ಹಾಗೂ ಮಲ್ಲೇಶ (60) ಎಂದು ಗುರುತಿಸಲಾಗಿದೆ.
ಅಣ್ಣಾಜಿ ತಮ್ಮ ಬೈಕಿನಲ್ಲಿ ಸೋರಬ್ ರಸ್ತೆ ಮುಲಕ ಬನವಾಸಿಯಿಂದ ಗುಡ್ನಾಪುರಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಪೊಲೀಸರಿಗೆ ಸುದ್ದಿಯನ್ನು ತಲುಪಿಸಿದ್ದಾರೆ. ಬನವಾಸಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು ಪ್ರಕರಣವನ್ನು ದಾಖಲುಮಾಡಿಕೊಂಡಿದ್ದಾರೆ.