ಕಂಡಕಂಡಲ್ಲಿ ಕಸದ ರಾಶಿ; ಭಟ್ಕಳದ ಅಭಿವೃದ್ಧಿಗೊಂದು ಕಳಂಕ

Source: sonews | By Staff Correspondent | Published on 7th August 2018, 6:46 PM | Coastal News | State News | Special Report | Public Voice | Don't Miss |

•    ಎಂ.ಆರ್.ಮಾನ್ವಿ 

ಉತ್ತರಕನ್ನಡ ಜಿಲ್ಲೆಯಲ್ಲೇ ಅನಿವಾಸಿ ಭಾರತಿಯರು ಹೆಚ್ಚಾಗಿ ವಾಸಿಸುವ ನಗರವೆಂದರೆ ನಿಸ್ಸಂಶಯವಾಗಿ ಭಟ್ಕಳ ಎಂದೇ ಹೇಳಬಹುದು. ಆದ್ದರಿಂದಲೆ  ಗಲ್ಫ್, ಸೌದಿ ಅರೇಬಿಯಾ ಮತ್ತಿತರರ ಹೊರದೇಶಗಳ ಪರಿಸರದಲ್ಲಿ ಬದುಕಿಬಂದ ಭಟ್ಕಳಿಗಳಿಗರಿಗೆ ಇಲ್ಲಿನ ರಾಶಿ ರಾಶಿ ಕಸವನ್ನು ಕಂಡು ನಿಜಕ್ಕೂ ಗಾಬರಿ ಮತ್ತು ಆಚ್ಚರಿ ಎರಡು ಏಕಕಾಲದಲ್ಲಿ ಉಂಟಾಗಬಹುದು. ಉತ್ತಮ ಪರಿಸರ, ಹವಮಾನ, ಕ್ಲೀನ್ ಮತ್ತು ಗ್ರೀನ್ ನಗರಗಳು ಅಲ್ಲಿನ ಆಡಳಿತ ಎಲ್ಲವೂ ಕಂಡು ಒಮ್ಮೆ ಇಲ್ಲಿನ ಆಡಳಿತದ ಮೇಲೆ ಕೋಪ ಮತ್ತು ರೋಷ ಉಂಟಾಗಲೂ ಬಹುದು ಅಥವಾ ಇಲ್ಲಿನ ಅವವ್ಯಸ್ಥೆ ಕಂಡೂ ರೋಸಿಹೋಗಲು ಬಹುದು. 

ಇರಲಿ ವಿಷಯಕ್ಕೆ ಬರುವುದಾದರೆ ನಗರದ ತುಂಬೆಲ್ಲಾ ಕಸದ ರಾಶಿ, ಪ್ಲಾಸ್ಟಿಕ್ ಕೊಟ್ಟೆಗಳು ಹೊಲಸನ್ನು ತನ್ನೊಡಲಲ್ಲಿ ತುಂಬಿಕೊಂಡು ನಾರುತ್ತಿವೆ. ಮದೀನಾ ಕಾಲೋನಿ, ಹನಿಫಾಬಾದ್, ಹೆಬಳೆ ಗ್ರಾ.ಪಂ.ವ್ಯಾಪ್ತಿಯ ಜಾಮಿಯಾಬಾದ್ ರಸ್ತೆ ಇನ್ನೂ ಹತ್ತಾರು ಪ್ರದೇಶಗಳು ಪ್ಲಾಸ್ಟಿಕ್ ಮಯಗೊಂಡಿದ್ದು ಇಕ್ಕೆಲಗಳಲ್ಲಿ ಹಾನಿಕಾರ ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿರುವ ಎಲ್ಲ ರೀತಿಯ ಕೊಳಕು ವಸ್ತುಗಳು ದುರ್ವಾಸನೆ ಬೀರಿ ಜನರನ್ನು ಭಯಬೀತರನ್ನಾಗಿ ಮಾಡಿವೆ. 

ಭಟ್ಕಳ ಈಗ ಅಭಿವೃದ್ಧಿ ಹೊಂದುತ್ತಿದೆ. ಹೊರದೇಶಗಳನ್ನು ನಾಚಿಸುವಂತಹ ಮಲ್ಟಿ ಫ್ಲೋರ್ ಕಟ್ಟಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಗಲ್ಫ್ ಮಾದರಿಯ ಬಹುಮಹಡಿ ಕಟ್ಟಡಗಳು, ಸುಂದರ ಇಮಾರತ್ತುಗಳು ಈಗ ಭಟ್ಕಳವನ್ನು ಮತ್ತಷ್ಟು ಸುಂದರಗೊಳಿಸುತ್ತಿದೆ. ಆದರೆ ನಗರದ ಸ್ವಚ್ಚತೆಯ ವಿಷಯಕ್ಕೆ ಬಂದಾಗ ಇದೊಂದು ಗಾರ್ಬೇಜ್ ನಗರವಾಗಿ ಮಾರ್ಪಡುತ್ತಿದೆ. ಪ್ಲಾಸ್ಟಿಕ್ ಕೊಟ್ಟೆಗಳ ಅತಿಯಾದ ಬಳಕೆಯ ದುಷ್ಪÀರಿಣಾಮ ಈಗ ಗೋಚರವಾಗತೊಡಗಿದೆ. ನೆಲದಲ್ಲಿ ಹುದುಗಿದರೂ ಕರಗದ ಪ್ಲಾಸ್ಟಿಕ್ ಚೀಲಗಳು ಮನುಷ್ಯನ ಆಯಸ್ಸನ್ನು ಮಾತ್ರ ಕರಗಿಸುತ್ತಿದೆ. ಅದರಿಂದಾಗಿ ಉಂಟಾಗುವ ಪರಿಸರ ನಾಶ ಸೇರಿದಂತೆ ಮನುಷ್ಯನ ಹಲವು ಅದ್ವಾನಗಳಿಗೆ ಈ ಪ್ಲಾಸ್ಟಿಕ್ ಬಳಕೆ ಕಾರಣವಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. 
ಇಲ್ಲಿನ ಸಂಘಸಂಸ್ಥೆಗಳು, ಸಮಾಜಸೇವಕರು ಇಲಾಖೆಯ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಕುರಿತು ಎಷ್ಟೆ ಜಾಗೃತಿ ಮೂಡಿಸಿದರೂ ಸಹ ಮನುಷ್ಯನ ಸಂಬಂಧ ಮಾತ್ರ ಪ್ಲಾಷ್ಟಿಕ್ ನೊಂದಿಗೆ ಅತ್ಯಂತ ಗಾಢವಾಗತೊಡಗಿದೆ. ಪ್ಲಾಸ್ಟಿಕ್ ಇಲ್ಲದೆ ಮನುಷ್ಯ ಬದುಕಲು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರತೊಡಗಿದೆ. ಪ್ರತಿಯೊಂದನ್ನು ಪ್ಲಾಷ್ಟಿಕ್ ಅವಲಂಭಿಸಿದ್ದರ ಪರಿಣಾಮವಾಗಿ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಒಂದೆರಡು ಬಡ ಅಂಗಡಿಕಾರರ ಅಂಗಡಿಗಳಿಗೆ ದಾಳಿ ಮಾಡಿ ಒಂದಿಷ್ಟು ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪತ್ರಿಕೆಗಳಲ್ಲಿ ವರದಿಯಾಗುತ್ತಾರೆ. ಹೋಲ್ ಸೇಲ್ ವ್ಯಾಪರಸ್ಥರ ಗೊಡವೆಗೆ ಹೋಗದ ಅಧಿಕಾರಿಗಳು ಕೇವಲ ಕಾಟಚಾರಕ್ಕೆ ಬಡಅಂಗಡಿಕಾರರ ಮೇಲೆ ತಮ್ಮ ಮಂತ್ರದಂಡ ಬೀಸುತ್ತಾರೆ. ಇದರ ಪರಿಣಾಮ ಕೆಲದಿನಗಳು ಮಾತ್ರ. ಮತ್ತದೆರಾಗ ಅದೇ ಹಾಡು ಎನ್ನುವಂತೆ ಜನರು ಕೂಡ ಎಲ್ಲವನ್ನು ಮರೆತು ಮೂಲಸ್ಥಿತಿಗೆ ಮರಳುತ್ತಾರೆ. 

ಪ್ಲಾಸ್ಟಿಕ್ ಚೀಲಗಳ ಒಂದು ಕತೆಯಾದರೆ ಅದು ಬಿಟ್ಟು ಹೋಗುವ ಭಯಂಕರ ಸಮಸ್ಯಗಳ ಕಥೆ ಮತ್ತೊಂದೆಡೆ ಇದನ್ನು ಸಮರ್ಪಕವಾಗಿ ವಿಲೆಮಾಡದೆ ಅಲ್ಲಲ್ಲೇ ಬಿಟ್ಟು ಅತ್ತ ಕೊಳೆಯದೆ ಇತ್ತ ಕರಗದೆ ಅಂತರಪಿಶಾಚಿಯಂತೆ ರಸ್ತೆಯಲ್ಲಿ ಅಲೆದಾಡುತ್ತಿರುವ ತುಂಡು ತುಂಡು ಕೊಟ್ಟೆಗಳು. ಇದನ್ನು ಸರಿಪಡಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾಗಿದೆ. ಪುರಸಭೆಯವರು ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಿದ್ದು ಒಂದು ಉತ್ತಮ ಬೆಳವಣೆಗೆ. ಆದರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇದರ ವ್ಯವಸ್ಥೆ ಇಲ್ಲದಿರುವುದು ಮಾತ್ರ ಸಮಸ್ಯೆಗಳ ಸೃಷ್ಟಿಗೆ ಕಾರಣ. ಹೆಬಳೆ ಪಂಚಾಯತ್. ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಂತೋ ಕಸದ ರಾಶಿಯೇ ತುಂಬಿಕೊಂಡಿದೆ. ಜನರು ತಮ್ಮ ಮನೆಯ ಮಂದೆ ಕಸವನ್ನು ಇಟ್ಟಿಕೊಳ್ಳದೆ ರಸ್ತೆಯ ಮೇಲೆಯೇ ಬಿಸಾಡಿ ಹೋಗುತ್ತಿದ್ದು ಯಾರನ್ನು ಹೇಳಬೇಕು ಯಾರನ್ನು ಬಿಡಬೆಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದೆಯಾದಲ್ಲಿ ಇಷ್ಟೊಂದು ಗಂಬೀರ ಸಮಸ್ಯ ಹುಟ್ಟಿಕೊಳ್ಳುತ್ತಿರಲಿಲ್ಲ. ಆದರೆ ಜನರಿಗೆ ಇದು ಬೇಕಾಗಿಲ್ಲ. ಕಸವನ್ನು ರಸ್ತೆಯ ಮೇಲೆ ಬೀಸಾಡುವುದರ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. 

ಕೆಲವರ್ಷಗಳ  ಹಿಂದೆ ಅನಿವಾಸಿ ಭಾರತೀಯರ ಸಂಘಟನೆ ರಾಬಿತಾ ಸೂಸೈಟಿ ‘ಗ್ರೀನ್ ಭಟ್ಕಳ ಕ್ಲೀನ್ ಭಟ್ಕಳ’ ಅಭಿಯಾನಕ್ಕೆ ಚಾಲನೆ ನೀಡಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತಾದರೂ ಅದರ ಫಾಲೋಅಪ್ ಮಾತ್ರ ಆಗಲಿಲ್ಲ. ಕೇವಲ ಬ್ಯಾನರ್, ಘೋಷಣೆಗಳಿಗೆ ಮಾತ್ರ ಅದು ಸೀಮಿತಗೊಂಡಿತು.

 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...