ಮುಂಡಗೋಡ : ಇಸ್ಪೀಟ್ ಆಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಹಿರಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಹಿರಳ್ಳಿ ಗ್ರಾಮದಲ್ಲಿ ರಘು ಕೃಷ್ಣಾಜಿಯವರ ಯವರ ಹೋಲಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಆಯ್ ಶಿವಾನಂದ ಚಲವಾದಿ ನೇತೃತ್ವದಲ್ಲಿ ಪೊಲೀಸ ಸಿಬ್ಬಂದಿಗಳು ದಾಳಿನಡೆಸಿ ಆರೋಪಿಗಳನ್ನು ಬಂದಿತರಿಂದ 7600ರೂ, 4 ಮೋಬೈಲ್, ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮಹ್ಮದ ಸಲೀಂ ಕಲ್ಲಾಪುರ (ಹಿರಳ್ಳಿ),ಮಾಬುಸಾಬ ಬಂದೂಕನವರ(ಹಿರಳ್ಳಿಗ್ರಾಮ), ಈರಪ್ಪ ಭೋವಿವಡ್ಡರ (ಗಣೇಶಪುರ ಗ್ರಾಮ), ಮುಸ್ತಾಕ ಯಲ್ಲಾಪುರ (ಇಂದಿರಾನಗರ ಪ್ಲಾಟ್), ಬಸವರಾಜ ಲಮಾಣಿ(ಲಮಾಣಿ ತಾಂಡಾ), ಶಂಕರ ಕೇರಿಮನೆ(ಚಿಗಳ್ಳಿ ಗ್ರಾಮ) ಬಂದಿತ ಆರೋಪಿಗಳು.
ಮಹೇಶ ಮಟ್ಟಿಮನಿ(ಹಿರಳ್ಳಿಗ್ರಾಮ) , ಉಸ್ಮಾನ ಕಲೆಗಾರ(ಹಿರಳ್ಳಿ ಗ್ರಾಮ) ಹಾಗೂ ಇತರ 3 ಜನ ತಪ್ಪಿಸಿ ಓಡಿಹೋದ ಆರೋಪಿಗಳು ಎಂದು ಹೇಳಲಾಗಿದೆ ಓಡಿಹೋದ ಆರೋಪಿಗಳನ್ನು ಬಂದಿಸಲು ಜಾಲ ಬೀಸಲಾಗಿದೆ.