ಭಟ್ಕಳ: ಇಲ್ಲಿನ ಮಾವಳ್ಳಿ-1ರ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 2 ವರ್ಷದಿಂದ ಇದರ ವ್ಯಾಪ್ತಿಯ ಪಡಿತದಾರರಿಗೆ ರೇಶನ್ ವಿತರಿಸಲು ಸಮಸ್ಯೆಯಾಗುತ್ತಿದ್ದು, ಇದರಿಂದಾಗಿ ತಿಂಗಳ ಪ್ರತಿದಿನವೂ ಮುಂಜಾನೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ರೇಶನ ಪಡೆಯಬೇಕಾಗಿದೆ.
ಇಲ್ಲಿನ ಮಾವಳ್ಳಿ 1- ಹಾಗೂ 2 ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 25 ಮಜಿರೆಯ 17,062 ಜನಸಂಖ್ಯೆಯುಳ್ಳ ಪ್ರದೇಶಕ್ಕೆ 30ದಿನದೊಳಗಾಗಿ ರೇಶನ ವಿತರಿಸುವುದು ಅಸಾಧ್ಯದ ಮಾತಾಗಿದೆ. ಕಳೆದ 2-3 ವರ್ಷದಿಂದ ರೇಶನ ವಿತರಣೆಯಲ್ಲಿ ಪಡಿತರದಾರರಿಗೆ ಕಿರಿಕಿರಿಯಾಗುತ್ತಿದ್ದು, ರೇಶನ ವಿತರಿಸುತ್ತಿರುವ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘವೂ ಜನರಿಗಾಗುವ ಹಾಗೂ 30 ದಿನದಲ್ಲಿ ವಿತರಿಸಲು ರೇಶನ ಅಂಗಡಿದಾರರಿಗೆ ಭಾರಿ ಒತ್ತಡವಾಗುತ್ತಿರುವ ಬಗ್ಗೆ ಸಂಘದ ಸಭೆಯಲ್ಲಿ ಸದಸ್ಯರ ಒಮ್ಮತದೊಂದಿಗೆ ಠರಾವು ಮಾಡದೇ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳುತ್ತಿದ್ದಾರೆ.
ಈ ಹಿಂದೆ ಇಲ್ಲಿ ಇರುವ ಆಯಾ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಯಿದ್ದು, ಆಗ ಮಾವಳ್ಳಿ-2ರಲ್ಲಿ ಖಾಸಗಿಯವರು ನಡೆಸಿಕೊಂಡು ಬರುತ್ತಿದ್ದ ವೇಳೆ ಕೆಲವು ಸಮಸ್ಯೆಯಿಂದ ಮುಚ್ಚಿ ಈಗ ಮಾವಳ್ಳಿ-1 ರಲ್ಲಿಯೇ ಒಂದೇ ಕಡೆ ಎರಡು ಪಂಚಾಯತ್ ವ್ಯಾಪ್ತಿಯ ರೇಶನ್ ವಿತರಣೆ ಮಾಡುತ್ತಿದ್ದು, ಆದರೆ ಜನರಿಗೆ ಪಡಿತರ ಪಡೆದುಕೊಳ್ಳುವುದೇ ಇನ್ನಷ್ಟು ತೊಂದರೆಯಾಗುತ್ತಿದೆ.
ಮಾವಳ್ಳಿ-1 ಗ್ರಾಮ ಪಂಚಾಯತನಲ್ಲಿ 13 ಮಜಿರೆಯಿಂದ 10,439 ಜನಸಂಖ್ಯೆಯಿದ್ದು, ಅದೇ ರೀತಿ ಮಾವಳ್ಳಿ-2 ಗ್ರಾಮ ಪಂಚಾಯತನಲ್ಲಿ 12 ಮಜಿರೆಯಿಂದ 6,623 ಜನಸಂಖ್ಯೆಯಿದೆ. ಸದ್ಯ ಮಾವಳ್ಳಿ-1 ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ ರೇಶನ ವಿತರಿಸುವ ಕೇಂದ್ರಕ್ಕೆ ಮಾವಳ್ಳಿ-2 ವ್ಯಾಪ್ತಿಯ ದೂರದ ಗ್ರಾಮೀಣ ಪ್ರದೇಶವಾದ ಇಲ್ಲಿನ ಕೋಟದಮಕ್ಕಿ, ಕೋಡ್ಸುಲು, ಮೀಡ್ಲು, ಹಡಾಲ್ ಸೇರಿದಂತೆ ಒಟ್ಟು 10-15 ಕಿ.ಮೀ. ದೂರದ ಜನರು ಬರಬೇಕಾಗಿದ್ದು, ಈಗಿನ ಬಯೋಮೇಟ್ರಿಕ ವ್ಯವಸ್ಥೆಯಿಂದ ಜನರು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದ ಪಡಿತರದಾರಿಗೆ ದಿನದಲ್ಲಿ 40ರಿಂದ 50 ಮಂದಿಗೆ ಮಾತ್ರ ರೇಶನ ವಿತರಿಸಲು ಸಾಧ್ಯವಾಗುತ್ತಿದ್ದು, ಒಂದು ವೇಳೆ ಸರ್ವರ ಸಮಸ್ಯೆಯಿಂದ ಬಯೋಮೆಟ್ರಿಕ್ನಲ್ಲಿ ಏನಾದರು ಸಮಸ್ಯೆಯುಂಟಾದರೆ ದೂರದ ಪ್ರದೇಶದಿಂದ ಬಂದವರು ರೇಶನ ಪಡೆಯದೇ ಹಿಂದಿರುಗಬೇಕಾಗುತ್ತದೆ. ರೇಶನ ಸಿಗದ ಹಿನ್ನೆಲೆಯಲ್ಲಿ ದೂರದ ಪ್ರದೇಶದ ಜನರು ರೇಶನ್ ಪಡೆಯಲು ಮುಂಜಾನೆ 4ಗಂಟೆಗೆ ಬಂದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಮಾವಳ್ಳಿ-2 ಗ್ರಾಮ ಪಂಚಾಯತ್ ಸಹ ಸಾಮನ್ಯ ಸಬೆಯಲ್ಲಿ ರೇಶನ ವಿತರಣೆಯಲ್ಲಿ ಜನರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಠರಾವು ಮಾಡಿ ಇಲಾಖೆಗೆ ಕಳುಹಿಸಿ ಆ ಮೂಲಕ ಒತ್ತಡ ಹಾಕಿ ಸಮಸ್ಯೆಯನ್ನು ಪರಿಹರಿಸಕೊಳ್ಳಬಹುದಾಗಿದೆ.
ಜವಾಬ್ದಾರಿ ವಹಿಸಬೇಕಾಗಿದೆ ವ್ಯವಸಾಯ ಸಹಕಾರಿ ಸಂಘ: ಸದ್ಯ ರೇಶನ ಪಡೆಯಲು ಎರಡು ಪಂಚಾಯತ್ ಜನರು ಮಾವಳ್ಳಿ-1ಕ್ಕೆ ಬರಬೇಕಾಗಿದ್ದು, ಪಡಿತರ ಸಿಗದೇ ಕಾಯಬೇಕಾಗಿದೆ. ಎರಡು ಪಂಚಾಯತ್ ಜನರಿಗೆ ಒಂದೇ ನ್ಯಾಯಬೆಲೆ ಅಂಗಡಿಯಲ್ಲಿ ರೇಶನ ವಿತರಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಂಘದ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಒಮ್ಮತದಿಂದ ಠರಾವು ಮಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಕಳುಹಿಸಿ ಸಮಸ್ಯೆಯ ಜವಾಬ್ದಾರಿ ಹೊತ್ತು ಇತ್ಯರ್ಥ ಮಾಡಬೇಕಾಗಿದೆ.
ಜಿಲ್ಲಾಧಿಕಾರಿಗಳೇ ಇತ್ತ ಕಡೆ ಸ್ವಲ್ಪ ಗಮನ ನೀಡಿ: 10-15 ಕಿ.ಮೀ. ದೂರದ ಗ್ರಾಮೀಣ ಪ್ರದೇಶದಿಂದ ಜನರು ಪಡಿತರಕ್ಕಾಗಿ ಕಾದು ಕುಳಿತುಕೊಳ್ಳಬೇಕಾಗಿದ್ದು, ಪಡಿತರರಿಗಾಗುವ ತೊಂದರೆಯ ಬಗ್ಗೆ ಆಹಾರ ಇಲಾಖೆಯಿಂದ ಮಾಹಿತಿ ಪಡೆದು ಸಮರ್ಪಕ ರೀತಿಯಲ್ಲಿ ಪಡಿತರಕ್ಕಾಗಿ ಜನರು ಕಾಯದೇ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
'ಎರಡು ಪಂಚಾಯತ್ ವ್ಯಾಪ್ತಿಯ ಜನರಿಗೆ ಒಂದೇ ಕಡೆ ರೇಶನ ಪಡೆಯಲು ಸಮಸ್ಯೆಯಾಗುತ್ತಿದ್ದು, ಈ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದು, ಮಾವಳ್ಳಿ-2 ಪಂಚಾಯತ್ ವ್ಯಾಪ್ತಿಯ ಜನರಿಗೆ ಅನೂಕುಲವಾಗುವಂತೆ ಅದರ ವ್ಯಾಪ್ತಿಯಲ್ಲಿಯೇ ಸೂಕ್ತ ಕಟ್ಟಡವನ್ನು ಇಲಾಖೆಯ ಮೂಲಕ ನಿಗದಿ ಪಡಿತರ ವಿತರಣೆ ಅನೂಕುಲ ಮಾಡಿಕೊಡಬೇಕೆಂದು ಕೃಷ್ಣ ನಾಯ್ಕ ಜಮೀನ್ದಾರ್- ಮಾವಳ್ಳಿ-1 ಪಂಚಾಯತ್ ಸದಸ್ಯ ಮನವಿ ಮಾಡಿದರು
Read These Next
ರೈಲಿನಡಿ ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ವ್ಯಕ್ತಿ
ಭಟ್ಕಳ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತೆರ್ನಮಕ್ಕಿಯಲ್ಲಿ ...
ಭಟ್ಕಳದ ಶಮ್ಸುದ್ಧೀನ್ ವೃತ್ತದ ಬಳಿ ರಸ್ತೆ ಅಪಘಾತ; ಆಟೋ ರಿಕ್ಷಾ ಚಾಲಕ ಗಂಭೀರ
ಭಟ್ಕಳ: ಭಟ್ಕಳದ ಹೃದಯಭಾಗವಾಗಿರುವ ಶಂಶುದ್ದೀನ್ ವೃತ್ತದ ಬಳಿ ಖಾಸಗಿ ಬಸ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ...
ಹೊನ್ನಾವರ: ಕಾಸರಕೋಡು ಬಂದರು ನಿರ್ಮಾಣಕ್ಕೆ ಸಹಕರಿಸಿ : ಜಿಲ್ಲಾಧಿಕಾರಿ
ಕಾಸರಕೋಡುನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಂದರು ಕಾಮಗಾರಿಗೆ ಅಗತ್ಯವಿರುವ ಸರ್ವೇ ಕಾರ್ಯವನ್ನು ಈ ತಿಂಗಳಲ್ಲಿ ...
ಜಿಲ್ಲೆಯಲ್ಲಿ ಗರಿಷ್ಠ ಮತದಾನದ ಉದ್ದೇಶ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಜಿಲ್ಲೆಯಲ್ಲಿ ಗರಿಷ್ಠ ಮತದಾನದ ಉದ್ದೇಶ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಭಟ್ಕಳದ ತಂಝೀಮ್ ವತಿಯಿಂದ ಮಾರ್ಚ್ 30 ಮತ್ತು 31 ರಂದು ಮೆಗಾ ವೋಟರ್ ಐಡಿ ಶಿಬಿರ
ಭಟ್ಕಳ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅರ್ಹ ಮತದಾರರನ್ನು ನೋಂದಾಯಿಸಲು ಮತ್ತು ಮತದಾರರ ಗುರುತಿನ ಚೀಟಿ ನೀಡಲು ಭಟ್ಕಳದ ...
ಪೌರಕಾರ್ಮಿಕರ ಮೊಗದಲ್ಲಿ ಸಂತೃಪ್ತಿಯ ಭಾವ ಮೂಡಿಸಿದ ಖಾಯಂ ನೇಮಕಾತಿ ಆದೇಶ
ಅಲ್ಲಿ ನೆರದಿದ್ದವರು ಎಂದಿನಂತಿನ ಸಾಮಾನ್ಯ ದಿನಗಳಂತೆ ಬೇಸರದ ಮನಸ್ಥಿತಿಯಲ್ಲಿರಲಿಲ್ಲ, ಶುಭ್ರ ವಸ್ತçದಾರಿಗಳಾಗಿದ್ದ ಅವರ ...
ಪಂಚಾಯತ್ ಸೇವೆಗಳನ್ನು ಪಡೆಯಲು ಬಂದಿದೆ ಪಂಚಮಿತ್ರ ವಾಟ್ಸಾಪ್
ಸರ್ಕಾರದ ಹಲವು ಇಲಾಖೆಗಳು ಆನ್ಲೈನ್ ಮೂಲಕ ಸಾರ್ವಜನಿಕರಿಗೆ ತಮ್ಮ ಕೈ ಬೆರಳಿನಲ್ಲಿಯೇ ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ...
ಇಡಿ ಭಯದಿಂದ ಬಿಜೆಪಿಗೆ ₹335 ಕೋಟಿ ದೇಣಿಗೆ ನೀಡಿದ 30ಕ್ಕೂ ಅಧಿಕ ಕಂಪನಿಗಳು
ಈ ಮಹತ್ವದ ಸಂಗತಿಯನ್ನು ‘ದಿ ನ್ಯೂಸ್ ಮಿನಿಟ್’ ಹಾಗೂ ‘ನ್ಯೂಸ್ ಲಾಂಡ್ರಿ‘ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ತಮ್ಮ ತನಿಖಾ ವರದಿಯಲ್ಲಿ ...
ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?
ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...
ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ
ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...
ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ
ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...