ಭಟ್ಕಳ: ನೇತ್ರಾಣಿ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ; ೨೫ ಮೀನುಗಾರರ ರಕ್ಷಣೆ ತಪ್ಪಿದ ಮಹಾ ದುರಂತ
ಭಟ್ಕಳ: ಸುಮಾರು ೨೫ ಮಂದಿ ಮೀನುಗಾರಿಕೆಗೆ ತೆರಳಿದ್ದ ಪರ್ಶಿನ್ ಬೋಟೊಂದು ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು ಮೀನುಗಾರರನ್ನು ಸ್ಥಳೀಯರು ಹಾಗೂ ಕೋಸ್ಟರ್ ಗಾರ್ಡ ನ ಸಿಬ್ಬಂಧಿಗಳು ಸಕಾಲದಲ್ಲಿ ತಲುಪಿ ರಕ್ಷಣೆ ಮಾಡಿದ ಘಟನೆ ಬುಧವಾರ ಭಟ್ಕಳ ಬಳಿಯ ನೇತ್ರಾಣಿ ದ್ವೀಪದ ಬಳಿ ಜರಗಿದೆ.
ಮುರುಡೇಶ್ವರದ ನಾಗೇಶ್ ಎಸ್. ನಾಯ್ಕ್ ಎಂಬುವವರ ‘ಅಮ್ಮಾ’ ಎಂಬ ಹೆಸರಿನ ಬೋಟ್ ದುರಂತಕ್ಕೀಡಾಗಿದ್ದು ಸುಮಾರು ೬೦ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು ಯಾವುದೇ ಜೀವನ ಸಂಭವಿಸದೆ ಮಹಾದುರಂತವೊಂದು ತಪ್ಪಿದಂತಾಗಿದೆ.
ಇತ್ತಿಚೆಗೆ ಭಟ್ಕಳದ ದೊಣಿಯೊಂದು ಉರುಳಿಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಎಂಟು ಮಂದಿ ಬದುಕುಳಿದು ದಡಸೇರಿದ್ದನ್ನು ಇಲ್ಲಿ ಸ್ಮರಿಸಿಬಹುದಾಗಿದೆ. (ಫೋಟೊ: ವಾಟಸಪ್ ನಲ್ಲಿ ಕಳುಹಿಸಿದೆ.