ಭಟ್ಕಳ: ಗೇಣಿ ಮಾಡಿದ ಅಡಿಕೆ ಮರದಲ್ಲಿನ ಸಿಂಗಾರ ಕೊಯ್ಯುವ ವೇಳೆ ಆಕಸ್ಮಿಕವಾಗಿ ಅಡಿಕೆ ಮರ ಮುರಿದು ಬಿದ್ದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೃಷಿಕ ಶನಿವಾರದಂದು ಮೃತಪಟ್ಟಿದ್ದಾನೆ.
ಮೃತ ಕೃಷಿಕ ರಾಮಾ ತಿಮ್ಮಪ್ಪ ಗೊಂಡ (38) ಮಾರುಕೇರಿ ನಿವಾಸಿ ಎಂದು ತಿಳಿದು ಬಂದಿದೆ. ಶನಿವಾರದಂದು ತಾನು ಗೇಣಿ ಮಾಡಿದ ಮಹಾಬಲೇಶ್ವರ ಗೋವಿಂದ ಹೆಗಡೆ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಿಕೆ ಮರ ಹತ್ತಿ ಸಿಂಗಾರ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಆಡಿಕೆ ಮರ ಮುರಿದು ಮರದಿಂದ ಕೆಳಗೆ ಬಿದ್ದಿದ್ದು ವ್ಯಕ್ತಿಗೆ ಬಲವಾದ ಪೆಟ್ಟು ಆಗಿದ್ದು ತಕ್ಷಣಕ್ಕೆ ಸ್ಥಳಿಯರು ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಕುಂದಾಪುರ ಸಾಗಿಸುತ್ತಿದ್ದ ವೇಳೆ ತ್ರಾಸಿ ಸಮೀಪ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆಂಬುದು ತಿಳಿದು ಬಂದಿದೆ. ಈ ಕುರಿತು ಮೃತ ಕೃಷಿಕನ ಬಾವ ಪರಮೇಶ್ವರ ಮಾಸ್ತಿ ಗೊಂಡ ಗ್ರಾಮೀಣ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.