ದಕ್ಷಿಣ ಕರ್ಣಾಟಕ ಸುನ್ನಿ ಸೆಂಟರ್ ಯು.ಎ.ಇ. ರಾಷ್ಟೀಯ ಸಮಿತಿ ಅದೀನದಲ್ಲಿ ಕಾರ್ಯಚರಿಸುತ್ತಿರುವ ರಾಸ್ ಅಲ್ ಖೈಮಾ ಯುನಿಟ್ ಇದರ ಮಹಾಸಭೆ ಯು ಜನಾಬ್. ಮುಹಮ್ಮದಾಲಿ ಮೂಡುತೋಟ ರವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಅಜ್ಮಾನ್ ಯುನಿಟ್ ಗೌರವಾಧ್ಯಕ್ಷರಾದ ಜನಾಬ್.ಅಬೂಬಕ್ಕರ್ ಮದನಿ ರವರ ದುವಾ ದೊಂದಿಗೆ ನಡೆಯಿತು. ಸಭೆಯಲ್ಲಿ ಯುನಿಟ್ ಪ್ರಧಾನ ಕಾರ್ಯದರ್ಶಿ ಜನಾಬ್. ಅಪ್ಜಲ್ ಮಂಗಳೂರು ರವರು ಸ್ವಾಗತಿಸಿ ರಾಷ್ಟೀಯ ಸಮಿತಿ ಸಲಹೆಗಾರರಾದ ಜನಾಬ್.ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ರವರು ಸಂಘಟನೆ ಹಾಗು ಸ್ಥಾಪನೆ ಯ ಬಗ್ಗೆ ವಿವರಿಸುವುದರೊಂದಿಗೆ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಯುನಿಟ್ ಉಸ್ತುವಾರಿಯಾಗಿ ಆಗಮಿಸಿದ ರಾಷ್ಟೀಯ ಸಮಿತಿ ಉಪಾಧ್ಯಕ್ಷರೂ ಆದ ಜನಾಬ್. ಲತೀಫ್ ಮುಲ್ಕಿ ರವರು ಚುನಾವಣಾದಿಕಾರಿಯಾಗಿ 2017-18 ರಸಾಲಿನ ನೂತನ ಸಮಿತಿಯನ್ನು ರಚಿಸಿದರು. ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್, ಯುನಿಟ್ ಉಸ್ತುವಾರಿಯಾಗಿ ಆಗಮಿಸಿದ ಜನಾಬ್.ಅಶ್ರಫ್ ಸತ್ತಿಕಲ್ ಹಾಗೂ ಶಾರ್ಜಾ ಯುನಿಟ್ ಅಧ್ಯಕ್ಷರಾದ ಜನಾಬ್.ಬಷೀರ್ ಕಾಪಿಕ್ಕಾಡ್ ರವರು ನೂತನ ಸಮಿತಿಗೆ ಶಭ ಹಾರೈಸಿದರು. ಸಭೆಯಲ್ಲಿ ಜನಾಬ್.ಅಬ್ಬಾಸ್ ಪಾಣಾಜೆ , ಜನಾಬ್.ಎ.ಕೆ.ಉಮ್ಮರ್ ಅಂಗಡಿ ಮಜಲು ರವರು ಉಪಸ್ಥಿತರಿದ್ದು ಯುನಿಟ್ ಪ್ರಧಾನ ಕಾರ್ಯದರ್ಶಿ ಜನಾಬ್. ಅಪ್ಜಲ್ ಮಂಗಳೂರು ವಾರ್ಷಿಕ ವರದಿ ಹಾಗೂ ಜೊತೆ ಕಾರ್ಯದರ್ಶಿ ಜನಾಬ್.ಮುಸ್ತಾಕ್ ಉಳ್ಳಾಲ ಲೆಕ್ಕಪತ್ರವನ್ನು ಮಂಡಿಸಿದರು.
2017 - 18 ರ ಸಾಲಿನ ನೂತನ ಸಮಿತಿ
ಗೌರವಾಧ್ಯಕ್ಷರು : ಜನಾಬ್.ರಪೀಕ್ ಮದನಿ ಉಪ್ಪಿನಂಗಡಿ
ಅಧ್ಯಕ್ಷರು: ಜನಾಬ್.ಮುಹಮ್ಮದ್ ಅಲಿ ಮೂಡುತೋಟ
ಉಪಾಧ್ಯಕ್ಷರು :ಜನಾಬ್.ಅಬ್ದುಲ್ ರಹಿಮಾನ್ ಸೂರಿಂಜೆ , ಜನಾಬ್.ಅಬ್ದುಲ್ಲಾ. ಎ.ಎಂ.ಟಿ
ಪ್ರಧಾನ ಕಾರ್ಯದರ್ಶಿ: ಜನಾಬ್.ಅಪ್ಜಲ್ ಮಂಗಳೂರು
ಜೊತೆ ಕಾರ್ಯದರ್ಶಿ: ಜನಾಬ್.ಮುಸ್ತಾಕ್ ಉಳ್ಳಾಲ, ಜನಾಬ್. ಮನ್ಸೂರು ಕಿನ್ಯ
ಕೋಶಾಧಿಕಾರಿ : ಜನಾಬ್.ಹಸನಬ್ಬ ಗಂಟಾಲ್ಕಟ್ಟೆ
ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು