ದುಬೈ: ಜೂನ್ 16 ರಂದು ಡಿ.ಕೆ.ಎಸ್.ಸಿ ಯು.ಎ.ಇ ಇದರ ಬ್ರಹತ್ ಇಪ್ತಾರ್ ಸಂಗಮ
ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಅಧೀನದಲ್ಲಿ ದುಬೈ ಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡುಬರುತ್ತಿರುವ ಬೃಹತ್ ಇಫ್ತಾರ್ ಕೂಟ ಕಾರ್ಯಕ್ರಮವು ಜೂನ್ 16 ರಂದು ಬರ್ ದುಬೈ ಯ ಮುಸಲ್ಲಾ ಟವರ್ ನ ಸಭಾಂಗಣ ದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಸರ್ ನಮಾಜ್ (4.30pm) ಬಳಿಕ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಜಲಾಲಿಯ ಮಜ್ಲಿಸ್ ಹಾಗೂ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಲಾವಾರು ಉಲಮಾಗಳು, ಉಮರಾಗಳು ಭಾಗವಹಿಸಲಿದ್ದಾರೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮಕುಟುಂಬ ಮಿತ್ರಾದಿಗಳೊಂದಿಗೆ ಆಗಮಿಸಬೇಕಾಗಿ ಡಿ.ಕೆ.ಎಸ್.ಸಿ ಇಪ್ತಾರ್ ಕಮಿಟಿ ಚೆಯರ್ಮೆನ್ ಹಾಜಿ.ನವಾಜ್ ಕೋಟೆಕ್ಕಾರ್ ಹಾಗೂ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಪದಾದಿಕಾರಿಗಳು ವಿನಂತಿಸಿರುತ್ತಾರೆ.
ವಿ.ಸೂ : ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ