ದುಬೈ: ಜ 27ರಂದು “ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017” 

Source: bcf | By Arshad Koppa | Published on 23rd January 2017, 2:11 AM | Gulf News | Special Report |

ಬ್ಯಾರೀಸ್ ಕಲ್ಚರಲ್ ಫೋರಮ್ ( BCF) ದುಬೈ ವತಿಯಿಂದ ನಡೆಯುವ ಬಹು ನಿರೀಕ್ಷಿತ BCF ವಾರ್ಷಿಕ ಕ್ರೀಡಾ ಕೂಟ  “ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017” ಇದೇ ಬರುವ ದಿನಾಂಕ 27/೦1/2017 ನೇ ಶುಕ್ರವಾರ UAE ಯ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕ್ರೀಡಾಂಗಣದಲ್ಲಿ ನೆರವೇರಲಿರುವುದಾಗಿ BCF ಸ್ಪೋರ್ಟ್ಸ್ ಸಮಿತಿ ಪ್ರಕಟಿಸಿದೆ. 

UAE ಆದ್ಯಂತ ಹಾಗೂ ಇತರ ಗಲ್ಫ್  ದೇಶಗಳಿಂದ ಸುಮಾರು 1000 ಕನ್ನಡ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇರುವ ಈ ಕ್ರೀಡಾ ಕೂಟದಲ್ಲಿ ಮಹನೀಯರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ರೀತಿಯ ಹಲವು ಕ್ರೀಡೆಗಳು ಹಾಗೂ ಆಟೋಟ ಸ್ಪರ್ಧೆಗಳು ಏರ್ಪಡಿಸಲಾಗುವುದು.
ಕ್ರಿಕೆಟ್, ವಾಲಿ ಬಾಲ್, ಫುಟ್ಬಾಲ್, ಕಬಡ್ಡಿ, ಥ್ರೋ ಬಾಲ್, ಹಗ್ಗ ಜಗ್ಗಾಟ ,ಬ್ಯಾಡ್ಮಿಂಟನ್, ಬಿಲಿಯರ್ಡ್, ಫುಟ್ಬಾಲ್,  ರೇಸ್, ರಿಲೇ, ಮಹಿಳೆಯರಿಗಾಗಿ,  ಪಾಕ ಸ್ಪರ್ಧೆ, ಮೆಹಂದಿ, ಮೊದಲಾದ ಹಲವಾರು ಸ್ಪೆರ್ಧೆಗಳಲ್ಲದೆ ಮಕ್ಕಳಿಗಾಗಿ ವಿಶೇಷವಾದ ಕ್ರೀಡೆಗಳನ್ನು ಆಯೋಜಿಸಲಾಡಿದೆ.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು  BCF  ಅಧ್ಯಕ್ಷರಾದ  ಡಾ  B K Yusuf ರವರು ವಹಿಸಲಿದ್ದು ಅಂದಿನ ವಿಶೇಷ ಅತಿಥಿಯಾಗಿ BCF ಫೌಂಡರ್ ಪೇಟ್ರನ್ ಡಾ.ತುಂಬೆ ಮೊಇದೀನ್, ಚಯರ್ಮನ್, ತುಂಬೆ ಗ್ರೂಪ್,  ಭಾಗವಹಿಸಲಿದ್ದಾರೆ. 
BCF ಪ್ರಧಾನ ಸಲಹೆಗಾರ ಜ: ಝಫ್ರುಲ್ಲಾ ಖಾನ್, ಚಯರ್ಮನ್ Zain  International Group ಹಾಗೂ ಇನ್ನೋರ್ವ BCF ಗೌ. ಸಲಹೆಗಾರ ಜ: ಫತಾವುಲ್ಲಾ ಸಾಹೇಬ್ ತೋನ್ಸೆ, ಮ್ಯಾನೇಜಿಂಗ್ ಡೈರೆಕ್ಟರ್ Barsha  Group  of  Companies  ಅಂದಿನ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಹಲವಾರು ಆಕರ್ಷಕ ರಾಫೆಲ್ ಡ್ರಾ ಬಹುಮಾನ ಗಳನ್ನೂ ಗೆಲ್ಲುವ ಅವಕಾಸಹವಿದೆ. 
ಮಧ್ಯಾಹ್ನದ ಭೋಜನದ ವ್ಯವಸ್ಥೆ ಯನ್ನು ಮಾಡಲಾಗಿದೆ ಹಾಗೂ ಚಾ ಕಾಫಿ ಮತ್ತು ಜ್ಯೂಸ್ ಮತ್ತು ತಿಂಡಿ ತಿನಸಿನ ವ್ಯವಸ್ಥೆಯನ್ನೂ ಮಾಡಲಾಗುವುದು.

ಸ್ಪರ್ಧೆಯ ವಿವರಗಳು ಮತ್ತು ಸಂಪರ್ಕಿಸ ಬೇಕಾದ ಮೊಬೈಲ್  ನಂಬರ್ ಗಳು

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...