ಭಟ್ಕಳ: ಮಿತವ್ಯಯ ಜೀವನಕ್ಕಾಗಿ ಆಸೆಗಳಿಗೆ ಕಡಿವಾಣ ಹಾಕಿ, ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು. ಅಂತರಂಗದ ಶುದ್ದಿ, ದೇವರನ್ನು ಒಲಿಯಲು ಮೊದಲು ಸಾಕ್ಷಾತ್ಕಾರವಾಗಬೇಕು. ಎಂದು ಸಾಲಿಗ್ರಾಮದ ಡಿವೈನ್ ಪಾರ್ಕನ ಆಡಳಿತ ನಿರ್ದೇಶಕ ಗುರೂಜಿ ಡಾಕ್ಟರಜೀ ಹೇಳಿದರು.
ಅವರು ಲ್ಲಿನ ನ್ಯೂ ಇಂಗ್ಲೀಷ ಶಾಲೆಯ ಕಮಲಾವತಿ ರಾಮನಾಥ ಸಭಾಗೃಹದಲ್ಲಿ ವಿವೇಕೋದಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾನೆ ಇಲ್ಲಾ ನೀನೆ ಎಲ್ಲಾ ಎಂದಾಗಲೆ ಜೀವನ ಸಾಪಲ್ಯದ ಹಾದಿಯಲ್ಲಿ ತುಳಿಯಲಿದೆ. ಮನುಷ್ಯನಲ್ಲಿರುವ ಅಹಂ ತ್ಯಜಿಸಲು, ಸಂಸಾರ ಏರಿಳಿತಗಳನ್ನು ತಹಹದಿಗೆ ತರಲು, ತನ್ಮಯತೆ, ಅಂತಃ ಶುದ್ದಿ, ಮನೋಲ್ಲಾಸ, ನಿತ್ಯಶಾಂತಿಯ ಕುರಿತ ಆಧ್ಯಾತ್ಮಿಕÀ ಭೋದನೆ ನೀಡಿದರು.
ನಂತರ ಭಟ್ಕಳ, ಹೊನ್ನಾವರ, ಕಾರವಾರ, ಕೈಗಾ, ಕದ್ರಾ, ಶಿರಸಿ, ಸಾಗರ, ತೀರ್ಥಹಳ್ಳಿ, ಉಡುಪಿ, ಕುಂದಾಪುರ, ಕಾರ್ಕಳಗಳಿಂದ ಆಗಮಿಸಿದ ಜಾಗೃತ ಬಳಗಗಳಿಗೆ ಆಧ್ಯಾತ್ಮಿಕ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಕುಂದಾಪುರದ ಬಳಗ ಮೊದಲ ಬಹುಮಾನ, ಉಡುಪಿ ದ್ವಿತೀಯ ಬಹುಮಾನ ಪಡೆದರೆ ತೃತೀಯ ಸ್ಥಾನಕ್ಕೆ ಹೊನ್ನಾವರ ಮತ್ತು ಭಟ್ಕಳದ ಬಳಗದ ನಡುವೆ ಪೈಪೋಟಿ ನಡೆಯಿತು. ನಂತರ ಮತ್ತೆ ರಸಪ್ರಶ್ನೆ ಕೇಳಿದಾಗ ಹೊನ್ನಾವರ ತೃತೀಯ ಸ್ಥಾನ ಪಡೆಯಿತು.
ಸಭೆಯಲ್ಲಿ ಭಟ್ಕಳ ಬಳಗದ ಅಧ್ಯಕ್ಷ ಸತೀಶ ರಾಯ್ಕರ, ಕೆ.ಜಿ. ಕರಿಸಿದ್ದಪ್ಪಾ, ಶ್ರೀಪತಿ ಸೋಮಯಾಜಿ, ವಾಸು ಸುವರ್ಣ ಇದ್ದರು. ತಾಲೂಕಿನ ವಿವದಡೆಯಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.