ಇಂದು ದಿನಾಂಕ: 25-07-2017 ರಂದು ಮಂಗಳವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಇಲ್ಲಿ ಪ್ರೊ.ಯು.ಆರ್.ರಾವ್ ರವರು ನಿಧನರಾದ ಪ್ರಯುಕ್ತ ವಿಶೇಷ ಸಭೆಯನ್ನು ಏರ್ಪಡಿಸಿ ಶ್ರದ್ದಾಂಜಲಿ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನವಾಗಿ ಆಗಮಿಸಿದ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು(ಅಭಿವೃದ್ಧಿ) ಯವರಾದ ಶ್ರೀ ಹೆಚ್.ಪಿ.ಲಿಂಗರಾಜು ರವರು ವಹಿಸಿದ್ದರು. ಆರಂಭದಲ್ಲಿ ಕಾರ್ಯಕ್ರಮಕ್ಕೆ ಶ್ರೀ ಬಿ.ಎಂ.ದಾರುಕೇಶ್ , ಉಪನ್ಯಾಸಕರು ಎಲ್ಲರನ್ನು ಸ್ವಾಗತಿಸಿದರು ಮತ್ತು ಪ್ರೊ.ಯು.ಆರ್.ರಾವ್ ರವರ ಸಾಧನೆಗಳನ್ನು ಕುರಿತು ವಿವರಿಸಿದರು. ನಂತರ ಉಪನ್ಯಾಸಕರಾದ ನಿಂಗಪ್ಪ ಇವರು ಯು.ಆರ್.ರಾವ್ ರವರ ವಿದ್ಯಾಭ್ಯಾಸ ಮತ್ತು ಸಂಶೋಧನೆಗಳ ಬಗ್ಗೆ ತಿಳಿಸಿದರು. ನಂತರ ಶ್ರೀಮತಿ ನೂರ್ಫಾತಿಮಾ ರವರು ಯು.ಆರ್.ರಾವ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಇವರ ನಿಧನದಿಂದ ನಮ್ಮ ದೇಶಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ ಎಂದು ತಿಳಿದರು ಕೊನೆಯದಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಹೆಚ್.ಕೆ.ಲಿಂಗರಾಜು ರವರು ಯು.ಆರ್.ರಾವ್ ರವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ್ದರು ಮತ್ತು ಎಸ್.ಎಲ್.ವಿ. ಬಗ್ಗೆ ಅವರ ಕಲ್ಪನೆ ಕನಸನ್ನು ಸಕಾರಗೊಳಿಸಿ ಇಡೀ ಜಗತ್ತೆ ನಿಬ್ಬೆರಗಾಗುವಂತೆ ಸಾಧನೆ ಮಾಡಿದ್ದರು. ಅವರ ಸಾಧನೆಯಲ್ಲಿ ನಾವು ಮುನ್ನಡೆಯೋಣ ಮತ್ತು ಅವರಂತೆ ರಾಷ್ಟ್ರದ ಅಭಿವೃದ್ಧಿಗಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಪಣ ತೊಟ್ಟು ಎಲ್ಲರು ಶ್ರಮಿಸೋಣ ಎಂದು ಕರೆ ನೀಡಿದರು.
ಪ್ರಾಚಾರ್ಯರು ಹಾಗೂ ಪದನಿಮಿತ್ತ
ಉಪನಿರ್ದೇಶಕರು(ಅಭಿವೃದ್ಧಿ)
ಡಯಟ್, ದಾವಣಗೆರೆ