ಕೋಲಾರ : ಸಂವಿಧಾನವನ್ನು ಪಾಲಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸಮಾಜದ ಎಲ್ಲರ ಏಳಿಗೆಗೆ ಇದು ಒಂದು ಅಡಿಪಾಯ. ಇದರ ಉಪಯೋಗವನ್ನು ಎಲ್ಲರೂ ಪಾಲಿಸಿದಾಗ ಸರ್ವಾಂಗೀಣ ಅಬಿವೃದ್ಧಿ ಸಾಧ್ಯ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ನಾಗರಾಜ ಹೊಸಹಳ್ಳಿ ತಿಳಿಸಿದರು.
70ನೇ ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಮತ್ತು ಥಿಯೋಸಾಫಿಲ್ ಸೇವಾ ವಿಭಾಗ ಆಯೋಜಿಸಿದ್ದ ಎಸ್.ಆರ್.ಆಸ್ಪತ್ರೆ ಒಳರೋಗಿಗಳಿಗೆ ಹಣ್ಣುಹಂಪಲು ಹಂಚಿ ಅವರು ಮಾತನಾಡಿದರು
ಥಿಯಾಸಾಫಿಕಲ್ ಸೇವಾ ವಿಭಾಗದ ಅಧ್ಯಿಕ್ಷ ವಿ.ಪಿ.ಸೋಮಶೇಖರ್ ಮಾತನಾಡಿ ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಸರ್ಕಾರ ಸದಾ ಸಿದ್ಧವಿದ್ದು, ಇದರ ಉಪಯೋಗವನ್ನು ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ನಾವು ಸಹಕಾರ ನೀಡಿದಾಗ ಮಾತ್ರ ಸಂವಿಧಾನಕ್ಕೆ ನಾವು ನೀಡಿದ ಗೌರವವಾಗಿದೆ ಎಂದು ಅವರು ಅಬಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ನಿರೀಕ್ಷಕರಾದ ಸುಬ್ರಮಣಿ, ವೆಂಕಟಲಕ್ಷ್ಮಮ್ಮ ಹಾಗೂ ಸಿಬ್ಬಂದಿ ಮತ್ತು ವೆಂಕಟೇಶ್, ರಮೇಶ್, ಥಿಯಾಸಾಫಿಕಲ್ ಸೊಸೈಟಿಯ ಹಿರಿಯ ಸದಸ್ಯರಾದ ತಿಪ್ಪಾರೆಡ್ಡಿ, ಆನಂದಲು ನಾಯ್ಡು, ಪರಮೇರ್ಶವರ್, ವಾಸವಿ ಕ್ಲಬ್ನ ಅಮರನಾಥ್ ಮತ್ತು ಎಸ್.ಎನ್.ಆರ್. ಆಸ್ಪತ್ರೆಯ ವೈದ್ಯರಾದ ಹೇಮಾ ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.