ಭಟ್ಕಳ: ಭಟ್ಕಳದ ಸಾಹಿಲ್ ಆನ್ಲೈನ್ ಸುದ್ದಿ ಜಾಲತಾಣದ ಪ್ರಧಾನ ಸಂಪಾದಕ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕøತ ಇನಾಯತುಲ್ಲಾ ಗವಾಯಿ ಅವರಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕøತ ಇನಾಯತುಲ್ಲಾ ಗವಾಯಿ ‘ಈ ಪ್ರಶಸ್ತಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವೂ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸಿದ ಅವರು ಈ ಪ್ರಶಸ್ತಿಗೆ ನಾನೋರ್ವ ಭಾಜನನಾಗಿಲ್ಲ ಬದಲಿಗೆ ಸಾಹಿಲ್ ಆನ್ಲೈನ್ ಸುದ್ದಿ ಜಾಲತಾಣದ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಸಮರ್ಪಸುತ್ತಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ಎಮ್.ಆರ್.ಮಾನ್ವಿ, ಕಾರ್ಯದರ್ಶಿ ಭಾಸ್ಕರ ನಾಯ್ಕ ಖಜಾಂಚಿ ಮೋಹನ ನಾಯ್ಕ, ಸದಸ್ಯ ಫಯಾಜ ಮುಲ್ಲಾ, ರಿಜ್ವಾನ್ ಗಂಗಾವಳಿ, ಆರ್. ನಿಸ್ಸಾರ್ ಅಹ್ಮದ್, ಪ್ರಸನ್ನ ಭಟ್ಟ, ಉದಯ ನಾಯ್ಕ ಉಪಸ್ಥಿತರಿದ್ದರು.