ಮುಂಡಗೋಡ : ಗ್ರಾಮ ವಿಕಾಸ ಯೋಜನೆಯಡಿ ನಂದಿಗಟ್ಟಾ ಗ್ರಾಮದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಕಳಪೆ ಹಾಗೂ ರಸ್ತೆ ಅಗಲಿಕರಣದಲ್ಲಿ ಕಡಿಮೆ ಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಾಗೂ ಅಧ್ಯಕ್ಷರಿಗೆ ಮನವಿ ಅರ್ಪಿಸಿದ್ದಾರೆ.
ರಸ್ತೆಯು ಸರಿಯಾದ ರೀತಿಯಲ್ಲಿ ನಿರ್ಮಾಣವಾಗಬೇಕು ಮತ್ತು ಅಗಲಿಕರಣವು ಕಡಿಮೆ ಯಾಗಬಾರದು ಸಂಬಂದಪಟ್ಟ ಅಧಿಕಾರಿಗಳು ಅಂದಾಜು ಪತ್ರಿಕೆಯ ನಕಲು ಗ್ರಾಮಸ್ಥರಿಗೆ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಅಂದಾಜು ಪತ್ರಿಕೆಯಂತೆ ಕಾಮಗಾರಿ ನಡಯದೇ ಇದ್ದರೆ ನಮಗೆ ಈ ರಸ್ತೆಯ ಕಾಮಗಾರಿ ಬೇಕಾಗಿಲ್ಲ ಹಾಗೂ ಕಾಮಗಾರಿಯನ್ನು ಮುಂದುವರೆಸಲು ಬಿಡುವುದಿಲ್ಲ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಕುರಿತು ದೂರವಾಣಿ ಮುಖಾಂತರ ಪತ್ರಿಕೆ ಜೊತೆ ಮಾತನಾಡಿದ ಎಪಿಎಮ್ಸಿ ಸದಸ್ಯ ನಿಂಗಪ್ಪ ಕಾವಟೆ ಮಾತನಾಡಿ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿದೆ. ಸರಿಯಾಗಿ ನಡೆಯುತ್ತಿಲ್ಲಾ ಕಾಮಗಾರಿ ನಿಲ್ಲಿಸಿ ಎಂದರು ಕೇಳುತ್ತಿಲ್ಲ.ಆದ್ದರಿಂದ ಸಂಬಂದ ಪಟ್ಟ ಇಲಾಖೆಯ ಇಂಜನಿಯರರಿಗ ಫೋನಮಾಡಿ ಬಿಲ್ ಮಾಡಬಾರದು ಎಂದು ತಿಳಿಸಿದ್ದೇವೆ.
ಮನವಿ ಕೊಡುವ ಸಂದರ್ಭದಲ್ಲಿಗ್ರಾಮಸ್ಥರಾದ ಸಂತೋಷ ಕಾಮಳೆ, ರಾಮಕೃಷ್ಣ ರಾಧಾಪುರ, ಮಂಜುನಾಥ ನೆಮ್ಮಣ್ಣನವರ, ಅಶೋಕ ರಾವಜಿ, ನಾರಾಯಣ, ಪರಶುರಾಮ, ಮಂಜುನಾಥ ಕವಟೆ, ವಿಷ್ಣು ಹಂಚಿನಮನಿ, ಯಲ್ಲಪ್ಪ ಆಲೂರ, ಇಂದುಬಾಯಿ ರಾಧಾಪುರ, ಗೋಪಿ ವಾಸ, ಶಾಂತವ್ವಾ ಕಟ್ಟಿಮನಿ, ಫಕ್ಕಿರೇಶ ಕಟ್ಟಿಮನಿ, ರತ್ನವ್ವಾ ನಾಣಾಪೂರ, ಅಬ್ದೂಸಾಬ ತಡಸ, ಸೇರಿದಂತೆ ನೂರಾರು ಗ್ರಾಮಸ್ಥರ ಸಹಿಹಾಕಿದ ಮನವಿಯನ್ನು ಸಲ್ಲಿಸಿದ್ದಾರೆ.