ಚಿಕ್ಕಮಗಳೂರು:  ವೀರಶೈವ-ಲಿಂಗಾಯತ ಎರಡೂ ಒಂದೇ, ಸರ್ಕಾರದ ಆಸಕ್ತಿ ರೈತರ ಸಮಸ್ಯೆಗಳತ್ತ ಹರಿಯಲಿ-ಜಂಗಮಬಳಗ ಚಿಕ್ಕಮಗಳೂರು:  ವೀರಶೈವ-ಲಿಂಗಾಯತ ಎರಡೂ ಒಂದೇ, ಸರ್ಕಾರದ ಆಸಕ್ತಿ ರೈತರ ಸಮಸ್ಯೆಗಳತ್ತ ಹರಿಯಲಿ-ಜಂಗಮಬಳಗ 

Source: so english | By Arshad Koppa | Published on 15th August 2017, 8:22 AM | State News | Guest Editorial |

ಚಿಕ್ಕಮಗಳೂರು ಜುಲೈ-14  ಪ್ರಾಚೀನ ವೇದ ಆಗಮೋಕ್ತ ಪರಿಧಿಯ ವೀರಶೈವ-ಲಿಂಗಾಯತ ಎರಡೂ ಒಂದೇ. ಇವನ್ನು ಪ್ರತ್ಯೇಕಿಸುವಲ್ಲಿ ಆಸಕ್ತಿತೋರುತ್ತಿರುವ ರಾಜ್ಯ ಸರ್ಕಾರ  ರೈತಸಮಸ್ಯೆಗಳು,  ಬರ-ಅತಿವೃಷ್ಟಿ, ನೀರಾವರಿ ಸಂಗತಿಗಳತ್ತ ಗಮನ ಕೇಂದ್ರೀಕರಿಸಿದರೆ ಜನಕಲ್ಯಾಣವಾಗುತ್ತದೆ ಎಂದು ಚಿಕ್ಕಮಗಳೂರು ಜಂಗಮಬಳಗ ಹೇಳಿದೆ.


ನಗರದ ‘ಸುವರ್ಣಮಾಧ್ಯಮ’ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಜಂಗಮಬಳಗದ ಸಂಚಾಲಕ ಚಿ.ಸ.ಪ್ರಭುಲಿಂಗಶಾಸ್ತ್ರಿ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಸಭೆ, ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ವಿಸ್ತøತವಾಗಿ ಚರ್ಚಿಸಿ ಲಿಂಗಾಯತ ವೀರಶೈವದ ಭಾಗವೆಂದು ಸಾರಿದೆ.  
ವೀರಶೈವ-ಲಿಂಗಾಯತ ಸಮಾನಾರ್ಥ ಶಬ್ದಗಳಾಗಿದ್ದು, ಆಚಾರ್ಯರು ಮತ್ತು ಶರಣರು ಸಮಾಜದ ಎರಡುಕಣ್ಣುಗಳು.  ಶಿವಸಂಸ್ಕøತಿ ಅನಾದಿಕಾಲದಿಂದಲೂ ಎಲ್ಲರೂ ಆಚರಿಸಿಕೊಂಡು ಬರುತ್ತಿದ್ದು,  ಮಾನವಜೀವಿತದ ಷೋಡಶ ಸಂಸ್ಕಾರಗಳನ್ನು ಅನುಸರಿಸಿಕೊಂಡು ಬರುತ್ತಿರುವಾಗ ಪ್ರತ್ಯೇಕತೆಯ ಕೂಗು ಅರ್ಥಹೀನ ಎಂದು ಜಂಗಮಬಳಗ ಅಭಿಪ್ರಾಯಿಸಿದ್ದು, ಆರ್ಥಿಕ-ಸಾಮಾಜಿಕ ಸೌಲಭ್ಯ ಪಡೆಯಲು ಸಂಘಟಿತ ಪ್ರಯತ್ನ ಒಳಿತೆಂದು ನಿರ್ಣಯದಲ್ಲಿ ಹೇಳಿದೆ.
ದೇವರು-ಧರ್ಮ ನಂಬದ, ಲಿಂಗಧರಿಸದ, ಪೂಜೆ-ಧಾರ್ಮಿಕಾಚರಣೆ ನಿರ್ಲಕ್ಷಿಸುವವರು ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದು ಪ್ರಶ್ನಾರ್ಥ ಎಂದಿರುವ ಜಂಗಮಬಳಗ, ಸರ್ಕಾರ-ರಾಜಕಾರಣ ಗಳು-ಮಠಾಧೀಶರು ತಮ್ಮ ತಮ್ಮ ಕರ್ತವ್ಯಗಳಿಂದ ವಿಮುಖರಾಗಬಾರದೆಂದು ಆಗ್ರಹಪಡಿಸಿದೆ.  
ಸನಾತನ ಹಿಂದೂಧರ್ಮದ ಭಾಗವಾಗಿರುವ ವೀರಶೈವ ಲಿಂಗಾಯತ ಸಂಸ್ಕøತಿ ಸದಾ ಐಕ್ಯತೆಯಿಂದ ಮನುಕುಲದ ಶ್ರೇಯಸ್ಸಿಗೆ ಕಾರಣ ೀಭೂತವಾಗಬೇಕು.  ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನೊಳಗೊಂಡ ಪಂಚಾಚಾರ್ಯರು, ಅಭಿನವಬಸವಣ್ಣ ಸಿದ್ಧಗಂಗಾಶ್ರೀಗಳು, ಪ್ರಗತಿಯಮೇರು ಸುತ್ತೂರು-ಸಿರಿಗೆರೆ-ಹುಬ್ಬಳ್ಳಿ-ಯಡೆಯೂರು-ಆನಂದಪುರಂ-ಶಿವಯೋಗಿಮಂದಿರದ ಶ್ರೀಗಳ ನೇತೃತ್ವದಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಸೂಕ್ತ ಮಾರ್ಗದರ್ಶನ ನೀಡಿ ರಾಜಕೀಯ ಹುನ್ನಾರಗಳನ್ನೆಲ್ಲ ವಿಫಲಗೊಳಿಸಬೇಕೆಂದು ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿರುವ ಜಂಗಮಬಳಗ, ಲೋಕದ ಅಭ್ಯುದಯಕ್ಕಾಗಿ ವೀರಶೈವ ಸಮುದಾಯ ಸಣ್ಣಪುಟ್ಟ ಭಿನ್ನತೆ ಬದಿಗೊತ್ತಿ ಒಟ್ಟಾಗಿ ಹೆಜ್ಜೆ ಹಾಕಬೇಕಾಗಿರುವುದು ಕಾಲದಕರೆ ಎಂದು ಅಭಿಪ್ರಾಯಿಸಿದೆ. 
ಕೂಡಲಸಂಗಮ ಎಂಬ ಅಂಕಿತವನ್ನೆ ತಿರುಚಿದವರನ್ನು ಮುಂದೆ ಮಾಡಿಕೊಂಡು ವೀರಶೈವ-ಲಿಂಗಾಯತ ನಡುವೆ ಕಂದಕ ಸೃಷ್ಟಿಸುವಲ್ಲಿ ರಾಜಕೀಯ ಹುನ್ನಾರ ಗೋಚರಿಸುತ್ತಿದೆ.  ಐವರು ಸಂಪುಟ ಸದಸ್ಯರನ್ನು ರಾಜಪ್ರವಾಸಕ್ಕೆ ಮುಖ್ಯಮಂತ್ರಿಗಳೆ ನಿಯೋಜಿಸಿದ್ದರೆಂಬ ಸಂಗತಿ ಮಾಧ್ಯಮಗಳು ಭಿತ್ತರಿಸಿದ್ದು, ಮುಂದಿನ ಪರಿಣಾಮಗಳನ್ನು ಊಹಿಸಿದ ಸಚಿವರೆ ಹಿಂದೆ ಸರಿದರು.  ವಿಧಾನಸೌಧದ ನೆರಳಿನಲ್ಲಿ  ತಮ್ಮ ಬೆಂಬಲಿಗ ಸಚಿವ, ಶಾಸಕರ ಮುಂದಾಳತ್ವದಲ್ಲಿ ಸಭೆ ಸಂಘಟಿಸಿ ಸದಾ ಪ್ರಚಾರದಲ್ಲಿರುವ ಕೆಲವು ಮಠಾಧೀಶರಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಕೂಗು ಹಾಕಿಸಲಾಗಿದೆ ಎಂದು ಜಂಗಮ ಬಳಗ ದೂರಿದೆ.
ಭಕ್ತಿಭಂಡಾರಿ ಬಸವೇಶ್ವರರನ್ನು ಸಣ್ಣಗುಂಪೊಂದನ್ನು ಪೇಟೆಂಟ್ ಪಡೆಯಲು ಸಾಧ್ಯವಿಲ್ಲ.  ಹಿಂದೂಸ್ತಾನದಲ್ಲಿ ತಾಲಿಬಾನ್ ವಿಕೃತಿ ಸಹಿಸಲಾಗದೆಂದಿರುವ ಜಂಗಮಬಳಗ, ಶ್ರೀಮದ್ರಂಭಾಪುರಿ ಡಾ||ವೀರಸೋಮೇಶ್ವರ ಜಗದ್ಗುರುಗಳ ಸಮನ್ವಯ ನಡೆ ಅನುಸರಿಸುವಲ್ಲಿ ಧರ್ಮಕ್ಕೆ ಶ್ರೇಯಸ್ಸಿದೆ ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ವೀರಶೈವ ಚಾರಿತ್ರಿಕ ಹಿನ್ನಲೆಯನ್ನು ಡಿಐಸಿ ನಿವೃತ್ತಜಂಟಿನಿರ್ದೇಶಕ ಬಿ.ಪಿ.ಶಿವಮೂರ್ತಿ ವಿವರಿಸಿದರು.  ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ನಿರ್ಣಯಗಳನ್ನು ಮಂಡಿಸಿದರು.  ರಂಗಕರ್ಮಿ ಆರ್.ಚಂದ್ರಶೇಖರ್ ನಿರೂಪಿಸಿದರು.  ರೇಖಾಪ್ರಸನ್ನ ತಂಡ ರೇಣುಕಗೀತೆ ಹಾಡಿದರು. 
ಪ್ರೊ.ರೇವಣಸಿದ್ದಯ್ಯ, ನಿವೃತ್ತ ಉಪಪ್ರಾಂಶುಪಾಲರಾದ ಜಯದೇವರಾಧ್ಯ ಮತ್ತು ಮಹಾಲಿಂಗಯ್ಯ, ನಿವೃತ್ತಡೆಪ್ಯುಟಿತಹಶೀಲ್ದಾರ್ ಚಂದ್ರಶೇಖರ್, ವೀರಶೈವ ಸಹಕಾರಬ್ಯಾಂಕಿನ ನಿರ್ದೇಶಕರಾದ ರವಿಕುಮಾರ್ ಮತ್ತು ಸುಶೀಲಮ್ಮ, ಅರ್ಚಕರ ಸಂಘದ ವೇ.ಮೂ.ಉಪ್ಪಳ್ಳಿ ಬಸರಾಜಯ್ಯಶಾಸ್ತ್ರಿ ಮತ್ತು ವೇ.ಮೂ.ಪುಪ್ಪಯ್ಯನವರು,  ವೀರಭದ್ರಸ್ವಾಮಿ ದೇವಸ್ಥಾನಸಮಿತಿ ಉಪಾಧ್ಯಕ್ಷ ಟಿ.ಪಿ.ಪ್ರಸನ್ನಕುಮಾರ್, ಪಾರ್ವತಿಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ, ಪಂಚಾಚಾರ್ಯ ಸೇವಾಸಮಿತಿ ಉಪಾಧ್ಯಕ್ಷ ವೀರಭದ್ರಯ್ಯ, ರಾಮಕೃಷ್ಣ ಕಾಲೇಜಿನ ಆಡಳಿತಾಧಿಕಾರಿ ಉಮಾಮಹೇಶ್ವರಯ್ಯ, ಸಾಫÀ್ಟವೇರ್ ಇಂಜಿನಿಯರ್ ರವೀಶ್‍ಜಿ.ಹಿರೇಮಠ, ನಿವೃತ್ತಶಿಕ್ಷಕರಾದ ಎ.ಎಂ.ರುದ್ರಾರಾಧ್ಯ, ಓಂಕಾರಯ್ಯ ಮತ್ತು ಸ್ವರ್ಣಗೌರಿ, ಕುನ್ನಾಳು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಆರಾಧ್ಯ, ಮುಖಂಡರಾದ ಗುರುಕಾಂತಆರಾಧ್ಯ, ಪರಮೇಶ್ವರಪ್ಪ, ಕರಿಬಸಯ್ಯ, ತೀರ್ಥಸ್ವಾಮಿ, ಕುಮಾರಸ್ವಾಮಿ, ಆರ್.ಡಿ.ಆರಾಧ್ಯ, ವನಜಾಕ್ಷಮ್ಮ, ಚನ್ನಗೊಡನಹಳ್ಳಿಉಮೇಶ್, ಮರುಳಸಿದ್ದಯ್ಯ ಮತ್ತಿತರರು ಮಾತನಾಡಿ ವೀರಶೈವಲಿಂಗಾಯತ ಭಿನ್ನವಲ್ಲ ಏಕತೆ ಕಾಪಾಡಲು ಬೃಹತ್ ರ್ಯಾಲಿ ಆಯೋಜಿಸಬೇಕೆಂದು ಸಲಹೆ ಮಾಡಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...