ಚಿಕ್ಕಮಗಳೂರು ಜುಲೈ-14 ಲೋಕಕಲ್ಯಾಣಕ್ಕಾಗಿ ಶ್ರೀಕೃಷ್ಣನ ಅವತಾರವಾಗಿದ್ದು ನ್ಯಾಯ, ನೀತಿ, ಧರ್ಮಪಾಲನೆಗೆ ಕೃಷ್ಣ ಮಾದರಿ ಎಂದು ಶಿಕ್ಷಣತಜ್ಞ ಬಿ.ಎಚ್.ನರೇಂದ್ರ ಪೈ ಅಭಿಪ್ರಾಯಿಸಿದರು.
ನಗರದ ಶ್ರೀಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಕೃಷ್ಣಜನ್ಮಾಷ್ಠಮಿಯ ಅಂಗವಾಗಿ ಇಂದು ಆಯೋಜಿಸಿದ್ದ “ರಾಧಾಕೃಷ್ಣವೇಷ” ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕೃಷ್ಣನ ತುಂಟತನ, ಮುಗ್ಧತೆ ಎಲ್ಲರಿಗೂ ಆಪ್ಯಾಯಮಾನ. ಮಕ್ಕಳು ಕೃಷ್ಣನವೇಷದಲ್ಲಿ ಹೇಗಿದ್ದರೂ ಚನ್ನ. ನಮ್ಮ ಪುರಾತನ ಸಂಸ್ಕøತಿ ಆಚರಣೆಯ ಪರಿಪಾಲನೆಯಲ್ಲಿ ಕೃಷ್ಣನ ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.
ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಧರ್ಮ ಸಂಸ್ಥಾಪನೆಗಾಗಿಯೆ ಕೃಷ್ಣನ ಅವತಾರವೆಂಬುದು ನಂಬಿಕೆ. ರಾಮ ಮತ್ತು ಕೃಷ್ಣ ಭಾರತೀಯ ಸಂಸ್ಕøತಿಯ ಮೌಲ್ಯಗಳ ಪ್ರತಿಪಾದಕರು. ಜಾತಿ, ಧರ್ಮ, ಪ್ರಾಂತ್ಯ, ಪಕ್ಷ, ಪ್ರದೇಶಗಳನ್ನು ಮೀರಿ ಜಗದ್ವಿಖ್ಯಾತರಾಗಿರುವ ಕೃಷ್ಣನ ವೇಷಭೂಷಣದಲ್ಲಿ ಮಕ್ಕಳನ್ನು ನೋಡಿ ಆನಂದಿಸುವ ಸಂಪ್ರದಾಯ ಹಿಂದಿನಿಂದಲು ನಡೆದುಕೊಂಡು ಬಂದಿದೆ. ಮೂರು ದಶಕಗಳಿಂದ ಭುವನೇಂದ್ರ ವಿದ್ಯಾಸಂಸ್ಥೆ ಕೃಷ್ಣವೇಷ ಸ್ಪರ್ಧೆಗಳನ್ನು ನಗರದಲ್ಲಿ ನಡೆಸಿಕೊಂಡು ಬಂದಿದೆ ಎಂದರು.
ಪ್ರಾಂಶುಪಾಲ ಬಿ.ವೀರಪ್ಪಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ ನ್ಯಾಯಪಕ್ಷಪಾತಿಯಾದ ಕೃಷ್ಣ ನೀತಿ ನಿಯಮ ಮೌಲ್ಯಗಳ ಪ್ರತೀಕ. ಕೌರವರು 18ಅಕ್ಷೋಣ ಸೈನ್ಯ ಹೊಂದಿದ್ದರೂ ಪಾಂಡವರು ಮಹಾಭಾರತ ಯುದ್ಧವನ್ನು ಕೃಷ್ಣನ ಸಹಾಯದಿಂದ ಗೆದ್ದಿದ್ದು ಇತಿಹಾಸ. ಮಕ್ಕಳಿಗೆ ಒಳ್ಳೆಯ ಆದರ್ಶ ಕಲಿಸಬೇಕೆಂದರು.
ಮುಖ್ಯಶಿಕ್ಷಕಿ ಜಮೀಲಾಖಾನಂ, ಎನ್.ಪೂಣ ್ಮಾ, ತೀರ್ಪುಗಾರದ ಲಕ್ಷ್ಮೀಶಿವರಾಮ್, ಸುಮಿತ್ರಾಶಾಸ್ತ್ರಿ ಮತ್ತು ಕೌಸರಿಬೇಗಂ ಪಾಲ್ಗೊಂಡಿದ್ದರು. ಪಂಕಜಾ ಪ್ರಾರ್ಥಿಸಿ, ವಾಣ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು. ಶಬನಾಅಕ್ತರ್ ಮತ್ತು ಸ್ಫೂರ್ತಿ ನಿರೂಪಿಸಿದರು. ಪ್ಲೇಗ್ರೂಪ್, ಎಲ್ಕೆಜಿ, ಯುಕೆಜಿ, 1ನೇ ತರಗತಿ, 2ನೇತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಸಿದ್ದು, 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.