ಭಟ್ಕಳ:ಕೆ.ಪಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ ಅವರು ಸೂಕ್ತ- “ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಪೌಂಡೇಶನ್
ಭಟ್ಕಳ: “ನಾಗರಿಕ ಸೇವೆಗಳು ಗಗನ ಕುಸುಮವಲ್ಲ (ರಿ) ಬೆಂಗಳೂರು ಇದರ ವತಿಯಿಂದ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನವನ್ನು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ ಅವರಿಗೆ ನೀಡಬೇಕೆಂದು ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮಣ್ಕುಳಿ ಒತ್ತಾಯಿಸಿದ್ದಾರೆ.
ಅವರು ಶುಕ್ರವಾರದಂದು ಇಲ್ಲಿನ ಖಾಸಗಿ ಹೊಟೇಲನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
"ರಾಜ್ಯ ಕಂಡ ಧೀಮಂತ ನಾಯಕರು, ಪ್ರಭಾವಿ ರಾಜಕಾರಣಿಯಾದ ಬಿ.ಕೆ.ಹರಿಪ್ರಸಾದ ಅವರು ಪಕ್ಷದ ಸಂಘಟನೆಗೆ ಹಲವಾರು ವರ್ಷದಿಂದ ದುಡಿದಿದ್ದು, ಪಾರದರ್ಶಕ ನಡೆಯ ರಾಜಕಾರಣಿಯಾಗಿದ್ದು ಇವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ ಪಕ್ಷ ಮುನ್ನಡೆದರೆ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ. ಇದರ ಜೊತೆಗೆ ಇವರು ರಾಜ್ಯ ಸಭಾ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರುವಾಸಿಯಾಗಿರುವ ನಾಯಕರಾಗಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಅವರೇ ಸೂಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡ ಇವರನ್ನು ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನ ನೀಡಬೇಕೆಂದು ನಾಗರಿಕ ಸೇವೆಗಳು ಗಗನ ಕುಸುಮವಲ್ಲ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮಣ್ಕುಳಿ ಮನವಿ ಮಾಡಿದ್ದಾರೆ.
ಈ ಸಂಧರ್ಬದಲ್ಲಿ ನಾಗರಿಕ ಗಗನಕುಸುಮವಲ್ಲ ಸಂಚಾಲಕ ಗಣಪತಿ ನಾಯ್ಕ, ಗಜೇಂದ್ರ ನಾಯ್ಕ, ಉಮೇಶ್ ನಾಯ್ಕ, ಹಾಗೂ ಇತರರು ಉಪಸ್ಥಿತಿ ಇದ್ದರು.