ವಾಜಪೇಯಿಯವರು ಭಟ್ಕಳಕ್ಕೆ ಬಂದ ಅನುಭವಗಳನ್ನು ಹಂಚಿಕೊಂಡ ಎ.ಎನ್. ಪೈ

Source: sonews | By Staff Correspondent | Published on 17th August 2018, 6:27 PM | Coastal News | State News | Don't Miss |

ಭಟ್ಕಳ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್‍ಜಿ ಯವರು 1987ರಲ್ಲಿ ಭಟ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದ ತಮ್ಮ ಅನುಭವಗಳನ್ನು ಇಲ್ಲಿನ ಬಿಜಪಿ ಮಾಜಿ ಅಧ್ಯಕ್ಷ ಮುಖಂಡ ಅನಂತ್ ಪೈಯವರು ವಾರ್ತಾಭಾರತಿಯೊಂದಿಗೆ ಹಂಚಿಕೊಂಡಿದ್ದು ಅವರೊಬ್ಬ ಮಹಾನ್ ಮೇಧಾವಿಯಾಗಿದ್ದರು ಎಂದಿದ್ದಾರೆ.

ದಿನಾಂಕ 23-11-1987 ರಂದು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಟಲ್ ಜಿಯವರು ಹೋಗುತ್ತಿದ್ದಾಗ  ಭಟ್ಕಳದಲ್ಲಿ 20 ನಿಮಿಷಗಳ ಕಾಲ ಅವರು ತಂಗಿದ್ದು  ಚನ್ನಪಟ್ಟಣ ದೇವಾಲಯದ ಆವರಣದ ವಿನಾಯಕ ರಂಗ ಮಂಟಪದಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ಬಿಜೆಪಿಯ ಬೆಳವಣಿಗೆ ಬಗ್ಗೆ ವಾಜಪೇಯಿಯವರು ಭಾಷಣ ಮಾಡಿದ್ದರು. ಆ ಕಾರ್ಯಕ್ರಮದಲ್ಲಿ ತಾವು ವಂದನಾರ್ಪಣೆ ಮಾಡಿದ್ದಾಗಿ ಅವರು ಸ್ಮರಿಸಕೊಂಡರು.

ಅಂದಿನ ಭಟ್ಕಳ ಪುರಸಭಾ ಅಧ್ಯಕ್ಷರಾದ ಡಿ. ಎಚ್ ಶಬ್ಬರ್ ಸಾಹೇಬರು ಮತ್ತು ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾಗಿದ್ದ ದಿ. ಡಾ. ಚಿತ್ತರಂಜನರವರು ಮತ್ತು ಇನ್ನೋರ್ವ ಪುರಸಭಾ ಸದಸ್ಯರು ಹಾಗೂ ಬಿಜೆಪಿ ಹಿರಿಯ ನಾಯಕರಾಗಿದ್ದ ದಿ.ಎನ್. ಜಿ. ಕೊಲ್ಲೆ ಯವರು ವಾಜಪೇಯಿಯವರನ್ನು ಭಟ್ಕಳದ  ಶಮ್ಸುದ್ದೀನ್ ವೃತ್ತದಲ್ಲಿ ಸ್ವಾಗತಿಸಿದ್ದರು. ಆಂದು ಪೊಲೀಸ್ ಅಧಿಕಾರಿ ಪೆಮ್ಮಯ್ಯ ಎಂಬುವವರ ಶಿಸ್ತಿನ ಸೆಲ್ಯೂಟ್ ಗೆ ಮಾರು ಹೋದ ವಾಜಪೇಯಿಯವರು ಪೊಲೀಸ್ ಅಧಿಕಾರಿಯ ಕೈಕುಲುಕಿ ಅವರನ್ನು ಅಭಿನಂಧಿಸಿದ್ದರು ಎಂದು ಸ್ಮರಿಸಿಕೊಂಡರು. 

ಶಿರಾಲಿಯ ಅಂದಿನ ಖ್ಯಾತ ವರ್ತಕರಾಗಿದ್ದ ದಿ.ಭಾಸ್ಕರ್ ಮಹಾಲೆಯವರು ವಾಜಪೇಯಿಯರೊಂದಿಗೆ ಮಾಡಿದ ಸಂಭಾಷನೆಯನ್ನು ಎ.ಎನ್.ಪೈ ಸ್ಮರಿಸಿಕೊಂಡಿದ್ದು ಹೀಗೆ. 
 

ಭಾಸ್ಕರ ಮಹಾಲೆ-  ಮೈ.....ಆಪ್ ಪ್ರಧಾನಮಂತ್ರಿ ಬನನಾ ದೆಖನಾ ಚಾಹತಾ ಹು.
ವಾಜಪೇಯಿಜಿ-  ಮೆರೆಕೊ ಉಮ್ಮಿದ್ ನಹಿ ಹೈ...... ಮೈಏಕ್ ಮಾಸ್ಟರ್ ಜಿ ಕಾ ಬೆಟಾ ಹು..... ದೇಶ್ ಕಾ ಸೇವಾ ಕರನೆ ಆಯಾ ಹು.
ಮಹಾಲೆ-  ಮೆರೆಕೊ ಉಮ್ಮಿದ್ ಹೈ..... ಆಪ್ ಏಕ್ ನ ಏಕ್ ದಿನ್ ಇಸ್ ದೇಶ ಕಾ ಪ್ರಧಾನಮಂತ್ರಿ ಬನೆಗಾ.

ಶಿರಾಲಿಯ ಭಾಸ್ಕರ ಮಹಾಲೆಯವರು ಅಂದು ಹೇಳಿದ್ದ ಮಾತು ಕಾಲಾನಂತರ ನಿಜವಾಗಿ ಈಗ ಇತಿಹಾಸವಾಗಿದೆ........... ವಾಜಪೇಯಿಯವರ ನೆನಪು ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿದೆ ಎನ್ನುತ್ತಾರೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...