ಹೊನ್ನಾವರ: ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕೆರೆಮನೆ ತಿರುವಿನಲ್ಲಿ ನಡೆದಿದೆ.
ಮೃತ ಬೈಕ್ ಸವಾರರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಕ್ಷಗಾನ ಕಲಾವಿದ ದಿನೇಶ ಮಡಿವಾಳ(೨೬) ಹಾಗೂ ಮಾವಿನಕುರ್ವಾ ಗ್ರಾಮದ ಪ್ರಸನ್ನ ಆಚಾರಿ(೨೩) ಎಂದು ಗುರುತಿಸಲಾಗಿದೆ.
ಹೊನ್ನಾವರ ದಿಂದ ಬಸ್ತಿ ಕಡೆ ಹೋಗುತಿದ್ದ ಬೈಕ್ ಗೆ ಹೊನ್ನಾವರದ ಕಡೆ ಬರುತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಘಟನೆಗೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.