ರಜೆ ಅಮಾನ್ಯಗೊಂಡಿದ್ದರಿಂದ ಸಿಐಎಸ್ಎಫ್ ಯೋಧನಿಂದ ನಾಲ್ವರು ಯೋಧರ ಗುಂಡಿಟ್ಟು ಕೊಲೆ
ಬಹಾರ್ : ರಜೆಯ ವಿಚಾರಕ್ಕೆ ಸಂಬಂದಿಸಿ ಸಿಐಎಸ್ಎಫ್ ಜವಾನನೊಬ್ಬ ಇತರ ನಾಲ್ವರು ಯೋಧರನ್ನು ಗುಂಡು ಹಾರಿಸಿ ಕೊಂದ ಘಟನೆ ಬಿಹಾರದ ಔರಂಗಬಾದಿನಲ್ಲಿ ನಡೆದಿದೆ. ಆರೋಪಿಯನ್ನು ಬಲಬೀರ್ ಎಂದು ಗುರುತಿಸಲಾಗಿದೆ.
ಈ ಘಟನೆಯು ನಬಿನಗರ್ ಪವರ್ ಜೆನೆರೇಟಿಂಗ್ ಕಂಪೆನಿಯಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷ ಡಾ.ಸತ್ಯಪ್ರಕಾಶ್ ತಿಳಿಸಿದ್ದಾರೆ.
ಬಲಬೀರ್ ರಜೆಗಾಗಿ ಅರ್ಜಿ ಸಲ್ಲಿಸಿದ್ದ, ಆದರೆ ರಜೆ ಮಂಜೂರಾಗಲಿಲ್ಲ. ಈ ಸಂದರ್ಭದಲ್ಲಿ ಇನ್ನೋರ್ವ ಸಹೋದ್ಯೋಗಿ ಈ ಬಗ್ಗೆ ಅಪಹಾಸ್ಯ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಬಲಬೀರ್ ಗುಂಡು ಹಾರಿಸಿದ್ದಾನೆ ದಾಳಿಯಿಂದ ಬಚ್ಚಾ ಶರ್ಮಾ ಹಾಗೂ ಎನ್.ಮಿಶ್ರಾ ಇಬ್ಬರು ಯೋಧರು ಸ್ಥಳದಲ್ಲೇ ಮೃತ ಪಟ್ಟರೆ ಅರವಿಂದ್ ಕುಮಾರ್ ಮತ್ತು ಜಿ.ಎಸ್.ರಾಮ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ಡಾ.ಸತ್ಯಪ್ರಕಾಶ್ ತಿಳಿಸಿದ್ದಾರೆ.