ಜೆಸಿಐ ವತಿಯಿಂದ ಸಿಂಡ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

Source: sonews | By Staff Correspondent | Published on 8th July 2018, 8:07 PM | Coastal News |

ಭಟ್ಕಳ : ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಹಾಗೂ ಜೆಸಿಐ ಭಟ್ಕಳ ಸಿಟಿ ಇವರ ಸಂಯಕ್ತ ಆಶ್ರಯದಲ್ಲಿ ಜೆಸಿಐ ಓರಿಯಂಟೇಷನ್ ತರಬೇತಿ ಕಾರ್ಯಕ್ರಮವನ್ನು ಇತ್ತಿಚಿಗೆ ಕುಮಟಾ ಸಿಂಡ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
    
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಅರುಣಕುಮಾರ ಶಿರೂರು ಸ್ವದ್ಯೋಗ ಮಾಡಲು ಕೌಶಲ್ಯದ ಜೋತೆಗೆ ವ್ಯಕ್ತಿತ್ವ ವಿಕಸನ, ಮಾಹಿತಿ ಹಾಗೂ ಸಂವಹನದಂತಹ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಉದ್ಯೋಗಿಯಾಗಿ ಹೋರಹೊಮ್ಮಲು ಸಾಧ್ಯ ಎಂದು ತಿಳಿಸಿದರು. ಜೆಸಿಐ ತನ್ನ ಸದಸ್ಯರಿಗೆ ಇದರ ಬಗ್ಗೆ ತರಬೇತಿ ನೀಡಿ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅಭಿವೃದ್ದಿ ಸಾಧಿಸಲು ಸಹಕಾರ ನೀಡುತ್ತದೆ ಎಂದು ತಿಳಿಸಿದರು. 

ಜೆಸಿಐ ಭಟ್ಕಳ ಸಿಟಿ ಅಧ್ಯಕ್ಷರಾದ ಕೆ ಜಬ್ಬರ ಸಾಹೇಬ್ ಮಾತನಾಡಿ ಭಟ್ಕಳ ಜೆಸಿಐ ಘಟಕದಿಂದ ಅನೇಕ ತರಬೇತಿ, ತಿಳುವಳಿಕೆ ಹಾಗೂ ಆರೋಗ್ಯ ತಪಾಷಣಾ ಶಿಬಿರ ಹಮ್ಮಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಕೆಲಸ ಮಾಡಿದೆ. ಈಗ ನಮ್ಮ ಘಟಕವು ಕುಮಟಾದಲ್ಲಿ ತರಬೇತಿ ಶಿಬಿರ ಎರ್ಪಡಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ನಮಗೆ ಹರ್ಷ ತಂದಿದೆ ಎಂದು ತಿಳಿಸಿದರು.
    
ಜೆಸಿಐ ಸದಸ್ಯರಾದ ನಾಗರಾಜ ಶೇಟ್, ನವೀನಕುಮಾರ ಎಟಿ, ಸುರೇಶ ಪೂಜಾರಿ, ಚಂದ್ರಕಾಂತ ಕಿಣಿ ಹಾಗೂ ಈಶ್ವರ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next