ಭಟ್ಕಳ: ತಾಲೂಕಿನ ಕರಿಕಲ್ನಲ್ಲಿ ನಿರ್ಮಿಸಲಾದ ನೂತನ ಧ್ಯಾನ ಕುಟೀರದ ಉದ್ಘಾಟನೆಯನ್ನು ನರೆವೇರಿಸಲು ಭಟ್ಕಳಕ್ಕೆ ಆಗಮಿಸಿದ ಶ್ರೀರಾಮಕ್ಷೇತ್ರ ಧರ್ಮಸ್ಥಳದ ಸ್ವಾಮಿಜೀಗಳಾದ ಶ್ರೀಭ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳನ್ನು ಮಗ್ಗದೂಮ್ ಕಾಲೋನಿಯ ಮುಸ್ಲಿಮ್ ಬಾಂಧವರು ಆದ್ದೂರಿಯಾಗಿ ಸ್ವಾಗತಿಸಿ ಅವರಿಗೆ ಶಾಲು ಹಾಕಿ ಫಲಪುಷ್ಪಾ ನೀಡಿ ಗೌರವಿಸಿದರು.
ಕರಿಕಲ್ ಗ್ರಾಮಕ್ಕೆ ಹೋಗಬೇಕಾದ ಸ್ವಾಮೀಜಿಗಳು ಮಗ್ದೂಮ್ ಕಾಲೋನಿ ಮಾರ್ಗವಾಗಿ ಹೋಗಬೇಕಾಗಿದ್ದು ಈ ಸಂದರ್ಭದಲ್ಲಿ ಸ್ವಾಮಿಜೀಗಳನ್ನು ಸ್ವಾಗತಿಸಲು ಅಲ್ಲಿನ ಮುಸ್ಲಿಮ್ ಯುಕವ ಸಂಘವಾಗಿರುವ ಶಾಹಿನ್ ಸ್ಪೋರ್ಟ್ ಸೆಂಟರ್ ನ ಸದಸ್ಯರು ಶಾಲು ಹಾಗೂ ಹಾರವನ್ನು ಹಿಡಿದು ನಿಂತುಕೊಂಡಿದ್ದು ಸ್ವಾಮೀಜಿಗಳ ಆಗಮನಕ್ಕ ಸರಿಯಾಗಿ ಅವರನ್ನು ಕಾರಿನಿಂದ ಬರಮಾಡಿಕೊಂಡು ರಸ್ತೆಯಲ್ಲೇ ಶಾಲು ಹಾಗೂ ಫಲಪುಷ್ಪವನ್ನು ನೀಡಿ ಗೌರವಿಸಿದರು.
ಭಟ್ಕಳದಲ್ಲಿ ಯಾವತ್ತು ಶಾಂತಿ ಸೌಹಾರ್ಧತೆ ಮಾನವೀಯತೆ ನಲೆಸುವ ನಿಟ್ಟಿನಲ್ಲಿ ಇಲ್ಲಿನ ಮುಸ್ಲಿಮ್ ಸಂಘಟನೆಗಳು ಕಾರ್ಯನಿರತವಾಗಿದ್ದು ಹಲವು ಧಾರ್ಮಿಕ, ಸೌಹಾರ್ಧತೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ-ಮುಸ್ಲಿಮರ ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ. ಕಳೆದ ವಾರ ಇದೇ ಸ್ವಾಮಿಜೀಗಳು ಹಲವು ಧರ್ಮಗಳು ಒಂದು ಭಾರತ ಎಂಬ ಸೌಹಾರ್ಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯಕ್ಕೆ ಶಾಂತಿಸಹನೆಯ ಪ್ರವಚನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ಶಾಹಿನ್ ಸ್ಪೋಟ್ರ್ಸ್ ಸೆಂಟರ್ ಅಧ್ಯಕ್ಷ ಸಮಿಯು ಇತ್ತಲ್, ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದೀಕ್ ಮಟ್ಟಾ, ಉಪಾಧ್ಯಕ್ಷ ಖಯ್ಯುಮ್ ಕೋಲಂಬೋ, ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೇನ್ ಹಲ್ಲಾರೆ, ಶಬ್ಬರ್ ಬಾಕ್ಪಠಾನ್, ಇರ್ಫನ್ ಮೆಡಿಕಲ್, ಇಮ್ಶಾದ್ ಮುಖ್ತಸರ್, ಮೌಲಾನ ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.