ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ನೇಣೆಗೆ ಶರಣು
ಭಟ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮುರ್ಡೇಶ್ವರದ ಬಸ್ತಿ ಬಿದ್ರಮನೆಯ ಕಾಮೇಶ್ವರಮನೆ ನಿವಾಸಿ ಕೃಷ್ಣ ಭೈರಾ ನಾಯ್ಕ( 51) ಎಂದು ಗುರುತಿಸಲಾಗಿದೆ.
ಕೃಷ್ಣ ನಾಯ್ಕ ಸರಾಯಿ ಕುಡಿತಕ್ಕೊಳಗಾಗಿದ್ದು ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಒಬ್ಬರೆ ವಾಸಿಸುತ್ತಿದ್ದರು ಎನ್ನಲಾಗಿದ್ದು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ನೊಂದು ಮನೆಯ ಕೋಣೆ ಗೋಡೆಗೆ ಅಡ್ಡಹಾಕಿದ ಪಿಕಾಸಿಗೆ ನೈಲಾನ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕೃಷ್ಣ ನಾಯ್ಕ ಪತ್ನಿ ಪದ್ಮಾವತಿ ಕೃಷ್ಣ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಮುಡೇಶ್ರ್ವರ ಠಾಣೆ ಎಎಸೈ ಮುಹಮ್ಮದ್ ಕಾಸೀಂ ಎಂ.ಶೇಖ್ ತನಿಖೆ ಕೈಗೊಂಡಿದ್ದಾರೆ.