ಭಟ್ಕಳ: ಹೊನ್ನಾವರ ಮಂಡಳ ವ್ಯಾಪ್ತಿಯ ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಕೃಷ್ಣಾನಂದ ಭಟ್ಟ ಬಲ್ಸೆ ಅವರಿಗೆ ಬೆಂಗಳೂರಿನಲ್ಲಿ ನಡೆದ ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಹಾಗೂ ವಿಶ್ವಹವ್ಯಕ ಸಮ್ಮೇಳನದಲ್ಲಿ ಹವ್ಯಕ ವೇದ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.
ಕೃಷ್ಣಾನಂದ ಭಟ್ಟ ಬಲ್ಸೆ ಇವರು ಬೈಲೂರಿನ ಬಲ್ಸೆಯವರಾಗಿದ್ದು ತಮ್ಮ ಚಿಕ್ಕ ವಯಸ್ಸಿನಿಂದಲೇ ಪೌರೋಹಿತ್ಯವನ್ನು ಮಾಡುತ್ತಾ, ವೇದಾಧ್ಯಯನವನ್ನು ಮಾಡಿದವರು. ಮುರ್ಡೇಶ್ವರ ದೇವಸ್ಥಾನದ ಉಪಾದಿಯನ್ನು ಹೊಂದಿರುವ ಇವರು ತಮ್ಮ ಪೌರೋಹಿತ್ಯದೊಂದಿಗೆ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಅನೇಕ ಅಶಕ್ತ ಕುಟುಂಬಗಳಿಗೆ ದಾನ ನೀಡುತ್ತಾ ಬಂದಿರುವ ಇವರು ಅನೇಕ ವಿದ್ಯಾರ್ಥಿಗಳಿಗೂ ಕೂಡಾ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠದ ಪರಮ ಶಿಷ್ಯರಾದ ಇವರು ಕಳೆದ ಹಲವಾರು ವರ್ಷಗಳಿಂದ ಶ್ರೀ ಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.