ಭಟ್ಕಳ: ತಾಲೂಕಿನ ಭಟ್ಕಳ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಆನಂದ ಕಿಣಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಿಕಟಪೂರ್ವ ಅಧ್ಯಕ್ಷ ವಿಷ್ಣು ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಸಲಾಗಿದೆ. ಕಾರ್ಯದರ್ಶಿಯಾಗಿ ವಿಟು ನಮ್ಮ ಟಿವಿ ಸಂಪಾದಕ ಶಂಕರ ನಾಯ್ಕ, ಖಜಾಂಚಿಯಾಗಿ ಭಾವನ ಟಿವಿ ವರದಿಗಾರ ಉಲ್ಲಾಸ್ ಶ್ಯಾನಭಾಗ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಹಿರಿಯ ವರದಿಗಾರರಾದ ರಾಘವೇಂದ್ರ ಭಟ್, ಸುಬ್ರಮಣ್ಯ ಭಟ್ ಮನಮೋಹನ ನಾಯ್ಕ, ವಸಂತ ದೇವಾಡಿಗ, ಜಾವೇದ್, ಯಾಹ್ಯ ಹಲ್ಲಾರೆ ಇದ್ದರು.