ಕಸಾಪದಿಂದ ಆ.೨೨ರಿಂದ ಪುಸ್ತಕೋತ್ಸವ - ಪುಸ್ತಕ ಪ್ರದರ್ಶನ ಮತ್ತು ಮಾರಾಟ
ಭಟ್ಕಳ: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೀಪಾ ಬುಕ್ ಹೌಸ್ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಆ.೨೨ರ ಮಂಗಳವಾರದಿಂದ ರಿಂದ ಆ.೨೯ರ ಮಂಗಳವಾರದ ತನಕ (ಒಂದು ವಾರದ ಕಾಲ) ನಗರದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಪುಸ್ತಕೋತ್ಸವ - ಪುಸ್ತಕ ಪ್ರದರ್ಶನ ಮತ್ತು ಮಾರಾಟ ಎರ್ಪಡಿಸಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಗಂಗಾಧರ ನಾಯ್ಕ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಲೇಖಕರ ಪುಸ್ತಕಗಳು ಇಲ್ಲಿ ದೊರೆಯುವುದಿದ್ದು ಪುಸ್ತಕಾಸಕ್ತರು ಇದರ ಪ್ರಯೋಜನವನ್ನು ಪಡೆಯಬೇಕು. ಪುಸ್ತಕಗಳನ್ನು ಖರೀಧಿಸಿ ಸಹಕರಿಸಬೇಕು ಎಂದೂ ಕೋರಿದ್ದಾರೆ.