ಭಟ್ಕಳ: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮುರ್ಡೇಶ್ವರ ದೇವಸ್ಥಾನದ ಅರ್ಚಕ ಡಾ. ಗಣಪತಿ ಪರಮೇಶ್ವರ ಭಟ್ಟ ಇವರನ್ನು ನೇಮಿಸಿ ಜೆ.ಡಿ.ಎಸ್. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ನೇಮಕ ಮಾಡಿದ್ದಾರೆ.
ಜೆ.ಡಿ.ಎಸ್. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ತಕ್ಷಣದಿಂದ ವಹಿಸಿಕೊಂಡು ಪಕ್ಷ ಸಂಘಟನೆ, ಎಲ್ಲಾ ಸಮುದಾಯದ ಮುಖಂಡರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿಸುವ ಕಾರ್ಯ ಮಾಡುವಂತೆಯೂ ಕೋರಿದ್ದಾರೆ.