ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ. ತಾಲೂಕಾ ಕಾರ್ಯನಿರತ ಸಂಘ ಕುಮಟಾ ಹಾಗೂ ಗೋಕರ್ಣ ಪತ್ರಕರ್ತರ ಸಹಯೋಗದಲ್ಲಿ ಗೋಕರ್ಣದ ಬ್ರಾಹ್ಮಣ ಪರಿಷತ್ತು ವೇದ ಸಭಾಭವನ ದಲ್ಲಿ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಜರುಗಿತು.
ಸಮಾರಂಭ ದಲ್ಲಿ ಭಟ್ಕಳದ ಖ್ಯಾತ ಪತ್ರಕರ್ತ ನಿಷ್ಠಾವಂತ ಬರಗಾರ, ತಮ್ಮ 15 ನೇ ವಯಸ್ಸಿನಿಂದಲೇ ಆನ್ ಲೈನ್ ಜಾಲತಾಣದಲ್ಲಿ ತೊಡಗಿಸಿಕೊಂಡಿರುವ ಭಟ್ಕಳದ ಸಾಹಿಲ್ ಆನ್ ಲೈನ್ ಸುದ್ದಿ ಜಾಲಾತಾಣದ ಪ್ರಧಾನ ಸಂಪಾದಕರಾದ ಶ್ರೀ ಇನಾಯತುಲ್ಲಾ ಗವಾಹಿ ಅವರಿಗೆ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ
ಕುಮಟಾ ಶಾಸಕ ದಿನಕರ ಶೆಟ್ಟಿ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ.ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್,ರಾಜು.ರಾಜ್ಯ ಸಮಿತಿ ಸದಸ್ಯರಾದ ರಾಧಾಕೃಷ್ಣ ಭಟ್ಟ ಹಾಗೂ ಇತರರು ಉಪಸ್ಥಿತಿ ಇದ್ದರು.