ಭಟ್ಕಳ: ಹಾಡವಳ್ಳಿ ಗ್ರಾಮ ಪಂಚಾಯತದಲ್ಲಿ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸಿರುವ ಕರಿಯಪ್ಪ ಎಂ.ನಾಯ್ಕ ರನ್ನು ಹಾಡವಳ್ಳಿ ಗ್ರಾಮ ಪಂಚಾಯತ ವತಿಯಿಂದ ಬೀಳ್ಕೋಡುವ ಸಮಾರಂಭವನ್ನು ಹಮ್ಮಿಕೋಳ್ಳಲಾಯಿತು.
ಗ್ರಾಮ ಪಂಚಾಯತನ ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ ಬೀಳ್ಕೋಡುಗೆಯ ನಿಮಿತ್ತ ಫಲ ತಾಂಬೂಲ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಾಡವಳ್ಳಿ ಗ್ರಾಮ ಪಂಚಾಯತನ ಸದಸ್ಯರಾದ ಗಣೇಶ ನಾಯ್ಕ, ಶ್ಯಾಮಲಾ ಶೆಟ್ಟಿ, ಮಂಗಲಾ ಶೆಟ್ಟಿ, ವಸಂತಿ ಮರಾಠಿ, ಸತೀಶ ಮರಾಠಿ, ಸಾರ್ವಜನಿಕರು
ಹಾಗೂ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೋರಕರ ಸ್ವಾಗತಿಸಿ, ವಂದಿಸಿದರು.