ಭಟ್ಕಳ: ಬಾಗಲಕೋಟೆಯ ನವನಗರದಲ್ಲಿರುವ ಕಲಾಭವನದಲ್ಲಿ ನಡೆದ "64ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2017" ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಗರದ ನಗರದ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘಕ್ಕೆ "ಉತ್ತಮ ಸಹಕಾರಿ ಸಂಘ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ, ಬೆಂಗಳೂರು ಇವರ ವತಿಯಂದ ನೀಡಲಾದ ಪ್ರಶಸ್ತಿಯನ್ನು ಸಹಕಾರಿಯ ಪರವಾಗಿ ಸನ್ಮಾನ ಹಾಗೂ ಪ್ರಶಸ್ತಿ ಪತ್ರ ನೀಡಿಕೆಯನ್ನು ಕ.ರಾ.ಸ.ಮಹಾಮಂಡಳ ನಿ, ಬೆಂಗಳೂರು ಇದರ ಅಧ್ಯಕ್ಷ ಡಾ. ಶೇಖರಗೌಡ ವಿ. ಮಾಲಿಪಾಟೀಲ ಅವರು ಸಂಘದ ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ ಹಾಗೂ ಉಪಾಧ್ಯಕ್ಷ ನಾರಾಯಣ ಮಂಜುನಾಥ ಶೆಟ್ಟಿ ಇವರಿಗೆ ನೀಡಿದರು.