ಜು.೩೦ ರಂದು ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಭಟ್ಕಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ಅಳ್ವೇಕೋಡಿ, ಶ್ರೀ ದುರ್ಗಾಪರಮೇಶ್ವರ ಮಾರಿ ಜಾತ್ರಾ ಸಮಿತಿ ಅಳ್ವೇಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.೩೦ರಂದು ರವಿವಾರ ಬೆಳಿಗ್ಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಕಿವಿ, ಮೂಗು, ಗಂಟಲು, ಎಲುವು ಮತ್ತು ಕೀಲು ತಪಾಸಣೆ, ಸ್ತ್ರೀರೋಗ ವಿಭಾಗ, ಕಣ್ಣು ತಪಾಸಣೆ ಇತ್ಯಾಗಿ ವಿಭಾಗದ ನುರಿತ ವೈದ್ಯರು ಭಾಗವಹಿಸುವುದಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆಯಬೇಕು ಎಂದೂ ವಿನಂತಿಸಲಾಗಿದೆ.
ಕೆ.ಎಂ.ಸಿ. ಮೆಡಿಕಲ್ ಕಾಲೇಜ್ ಆಸ್ಪತ್ರೆ ಅತ್ತಾವರ, ಮಂಗಳೂರಿನಿಂದ ನುರಿತ ವೈದ್ಯರ ತಂಡ ಭಾಗವಹಿಸುವುದಿದ್ದು ವಿಶೇಷ ಚಿಕಿತ್ಸೆ ಅಗತ್ಯವಿದ್ದವರಿಗೆ ಕೆ.ಎಂ.ಸಿ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಮತ್ತು ಸರ್ಜರಿ ಸೌಲಭ್ಯವನ್ನು ಪಡೆಯಲು ಹಸಿರು ಕಾರ್ಡ ನೀಡಲಾಗುವುದು ಎಂದೂ ತಿಳಿಸಲಾಗಿದೆ.
ಅದೇ ದಿನ ಕೆ.ಎಂ.ಸಿ. ದಂತ ಮಹಾವಿದ್ಯಾಲಯದಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎರ್ಪಡಿಸಿದ್ದು ಬಾಯಿ ಮತ್ತು ಹಲ್ಲಿನ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ಹಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹಾಳಾದ ಹಲ್ಲುಗಳನ್ನು ಕೀಳುವುದು, ಮಕ್ಕಳಿಗಾಗಿ ವಿಶೇಷ ತಪಾಸಣೆ ತಜ್ಞ ವೈದ್ಯರಿಂದ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.