ಭಟ್ಕಳ: ಅಕಸ್ಮಿಕವಾಗಿ ಕಾಲು ಜಾರಿಬಿದ್ದ ಪರಿಣಾಮ ಬಾಲಕನೋರ್ವ ಮರಣ ಹೊಂದಿದ ಘಟನೆ ಭಾನುವಾರ ಶರಾಬಿ ನದಿಯಲ್ಲಿ ಜರಗಿದೆ.
ಮೃತ ಬಾಲಕನನ್ನು ಮಾವಿನ ಕುರ್ವೆ ಪಂಚಾಯತ್ ವ್ಯಾಪ್ತಿಯ ಬೆಳ್ನಿಯ ಅಜಯ ನರಸಿಂಗ ಮೊಗೇರ್(9) ಎಂದು ಗುರುತಿಸಲಾಗಿದೆ.
ಯುಗಾದಿ ಹಬ್ಬದ ಊಟ ಸೇವಿಸಿ ಸ್ನೇಹಿತರೊಂದಿಗೆ ಶರಾಬಿ ನದಿ ದಡದಲ್ಲಿ ಆಟವಾಡುತ್ತಿದ್ದಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ಸ್ಥಳಿಯರು ಗಮಸಿ ಬಾಲಕನ್ನು ನೀರಿನಿಂದ ಹೊರಗೆ ತಂದು ಆತನನ್ನು ಬದುಕಿಸಲು ಪ್ರಯತ್ನಿಸಿದರು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿದ್ದರು ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದದೆ.