ಭಟ್ಕಳ: ಅಪರಿಚಿತರಿಂದ ಯುವಕರ ಕಿಡ್ನಾಪ್??
ಭಟ್ಕಳ: ಇಲ್ಲಿನ ಬಂದರ್ ರಸ್ತೆಯ ೫ನೇ ಕ್ರಾಸ್ ಬಳಿ ಮೂರು ಅಪರಿಚಿತ ವಾಹನಗಳು ಇಬ್ಬರು ಅಪರಿಚಿತ ಯುವಕರನ್ನು ಅಪಹರಣ ಮಾಡಿದ್ದಾಗಿ ತಿಳಿದುಬಂದಿದೆ.
ಅಪಹರಣಕಾರರು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದು ಅಪಹರಣಕ್ಕೊಳಗಾದ ಯುವಕರು ಸ್ಥಳಿಯರೇ ಅಥವಾ ಬೇರೆಕಡೆಯಿಂದ ಬಂದವರೆ ಎನ್ನುವುದರ ಕುರಿತು ಯಾವುದೇ ಸ್ಪಷ್ಟ ವಿವರಗಳು ಲಭ್ಯವಾಗಿಲ್ಲ. ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಸಕ್ರೀಯರಾಗಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಘಟನೆಯ ವಿವರ ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.