ಭಟ್ಕಳ: ಬೆಂಗಳೂರು ಡಾಲರ್ಸ ಕಾಲೋನಿಯಲ್ಲಿ ಇತ್ತಿಚೀಗೆ ನಡೆದ ಕೈ ಮಗ್ಗ, ಖಾದಿ ಮತ್ತು ಗ್ರಾಮಿಣ ಉತ್ಪನ್ನಗಳು, ಸಾವಯವ ತರಕಾರಿ, ಹಣ್ಣು ,ದಾನ್ಯಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ “ಗ್ರಾಮೀಣ ಅಂಗಡಿ” ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಉತ್ತಮ ಗ್ರಾಮೀಣ ಕುಶಲಕರ್ಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಭಟ್ಕಳ ತಾಲೂಕಿನ ಬೇಂಗ್ರೆಯ ಉಶೀರಾ ಇಂಡಸ್ಟ್ರೀಸ್ ಮೂಲಕ ಕಳೆದ 25 ವರ್ಷಗಳಿಂದ ಲಾವಂಚ ಕರಕುಶಲ ವಸ್ತುಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ಮಾರಾಟ ಮಾಡುವ ಮೂಲಕ ನೂರಾರು ಬಡ ಮಹಿಳೆಯರಿಗೆ, ವಿಕಲಚೇತನರಿಗೆ ಉದ್ಯೋಗ ನೀಡಿರುವ ಉ.ಕ ಜಿಲ್ಲೆಯ ಗ್ರಾಮೀಣ ಕರಕುಶಲ ಜನಕರೆಂದು ಖ್ಯಾತರಾದ ಎಂ.ಡಿ. ಮ್ಯಾಥ್ಯೂರವರಿಗೆ ರಾಜ್ಯದ ಉತ್ತಮ ಕುಶಲಕರ್ಮಿ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಚಿತ್ರ ನಿರ್ದೇಶಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ , ಖ್ಯಾತ ಚಲನ ಚಿತ್ರ ನಟಿ ಸುಧಾರಾಣಿ , ಜೀವ ವೈವಿಧ್ಯ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಸತ್ಯ ನಾರಾಯಣ ಭಟ್, ಗ್ರಾಮೀಣ ಅಂಗಡಿಯ ಸಂಸ್ಥಾಪಕರಾದ ಬಿ.ರಾಜಶೇಖರ ಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.