ವ್ಯಕ್ತಿ ಕಾಣೆ; ದೂರು ದಾಖಲು

Source: sonews | By Staff Correspondent | Published on 27th July 2017, 9:42 PM | Coastal News | Don't Miss |

ಭಟ್ಕಳ: ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಇಲ್ಲಿನ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  
ಹಾಡುವಳ್ಳಿಯ ಬಡೇಬಾಗಿಲುವಿನ ಲಿಂಗು ಮಾಗ್ತು ಮರಾಠಿ (೬೨) ಎನ್ನುವವರೇ ನಾಪತ್ತೆಯಾದವರಾಗಿದ್ದು ಆತನ ಪುತ್ರ ಪುರ್ಸು ಮರಾಠಿ ದೂರು ನೀಡಿದ್ದಾರೆ. ದೂರಿನಲ್ಲಿ ಜು.೨೩ರಂದು ಮನೆಯಿಂದ ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮದ್ಯಾಹ್ನದ ತನಕ ದೇವಸ್ಥಾನದಲ್ಲಿ ಇರುವುದಾಗಿ ತಿಳಿದು ಬಂದಿದ್ದು ಇನ್ನೂ ತನಕ ಮನೆಗೆ ವಾಪಾಸು ಬಂದಿದ್ದು ಇರುವುದಿಲ್ಲ. ಯಾರಾದರೂ ಇವರನ್ನು ಕಂಡರೆ ತಕ್ಷಣ ಮುರ್ಡೇಶ್ವರ ಪೊಲೀಸ್ ಠಾಣೆ (೦೮೩೮೫-೨೬೮೮೯೬) ದೂರವಾಣಿಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...