ಭಟ್ಕಳ: ಆಸ್ಪತ್ರೆಗೆಂದು ರೈಲಿನಲ್ಲಿ ತೆರಳಿದ್ದವರ ಚಿನ್ನಾಭರಣ, ನಗದು ಇದ್ದು ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ನಿನ್ನೆ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.
ಕಾರವಾರದ ನಂದನಗದ್ದಾದ ನಿವಾಸಿ ರಾಮದಾಸ ನಾರಾಯಣ ಕಾಣಕೋಣಕರ್ ಎಂಬುವವರು ಕುಟುಂಬದೊಂದಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ನೇತ್ರಾವತಿ ಎಕ್ಸಪ್ರೆಸ್ (ರೈ.ನಂ: 14345) ನಲ್ಲಿ ಕಾರವಾರದಿಂದ ತೆರಳಿದ್ದರು.ಈ ವೇಳೆ ರೈಲು ಮುರ್ಡೇಶ್ವರ ನಿಲ್ದಾಣದ ಸಮೀಪ ನಿಧಾನವಾಗಿ ಚಲಿಸುತ್ತಿರುವಾಗ ಅವರ ಪತ್ನಿ ರೇಷ್ಮಾರ ವ್ಯಾನಿಟಿ ಬ್ಯಾಗ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಬ್ಯಾಗಿನಲ್ಲಿ 8 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣ ಹಾಗೂ 35 ಸಾವಿರ ನಗದು ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.