ಭಟ್ಕಳ: ಸಿಧ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಮಹಿಳೆಯರ ದಿನಾಚರಣೆ ಅಂಗವಾಗಿ ವಿಶೇಷ ಆರೋಗ್ಯ ಮತ್ತು ನೈರ್ಮಲ್ಯ ಅರಿವನ್ನು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೊನ್ನಾವರದ ಪ್ರಸಿದ್ದ ಸುವಿಧಾ ನರ್ಸಿಂಗ್ಹೋಂನ ಮುಖ್ಯಸ್ಥೆ ಡಾ.ಸುನೈನಾ ಪಡುಬಿದ್ರಿ ಅವರು ವಿದ್ಯಾರ್ಥಿನಿಯರಿಗೆ “ಮಾಸಿಕ ಋತುಸ್ರಾವ, ಸಮಸ್ಯೆ ಮತ್ತು ಪರಿಹಾರಗಳು” ಈ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಆ ಸಮಯದಲ್ಲಿ ಅನುಸರಿಸಬೇಕಾದ ಆಹಾರ ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ತಿಳುವಳಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಶಾಂತಲಾ ಶ್ಯಾನಭಾಗ ಹಾಗೂ ಎಲ್ಲಾ ಮಹಿಳಾ ಸಿಬ್ಬಂದಿಗಳು ಹಾಜರಿದ್ದರು.