ಭಟ್ಕಳ: ಭವಿಷ್ಯದಲ್ಲಿ ನೀರಿಗಾಗಿಯಾದರೂ ಮರಗಳನ್ನು ಬೆಳೆಸಿ-ಗೌಡ

Source: sonews | By Staff Correspondent | Published on 27th July 2017, 8:01 PM | Coastal News | Don't Miss |

ಭಟ್ಕಳ: ಭವಿಷ್ಯದಲ್ಲಿ ಅತಿ ಪ್ರಚಲಿತ ವಿಷಯವಾಗಿ ನಿರಿನ ಸಮಸ್ಯೆಯೇ ಉದ್ಭವಿಸುವದರಿಂದ ಸಾರ್ವಜನಿಕರು ಮುಂಜಾಗೃತೆವಹಿಸಿ ಮರಗಳನ್ನು ಬೆಳೆಸುವ ಮೂಲಕ ಭವಿಷ್ಯದ ಅಪಾಯದಿಂದ ಪಾರಾಗಬೇಕೆಂದು ಹಾಡವಳ್ಳಿ  ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಎಂ.ಡಿ ಪಾರ್ಶ್ವನಾಥ ಗೌಡ ಕರೆ ನೀಡಿದರು. 
ಅವರು ಹಾಡವಳ್ಳಿ ಇಲಾಖೆ ವಿಶ್ರಾಂತಿ  ಗೃಹ ಕುಮದ್ವತಿಯಲ್ಲಿ  ಜರುಗಿದ ಸಸಿ ವಿತರಣಾ  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಇಂದು ವಿತರಿಸುವ ಸಸಿ ನೆಟ್ಟು ಪೋಷಿಸಿದವರ ಮನೆ-ಮನ ಬೆಳಗಲಿ ಆ ಮೂಲಕ ಕಾಡು-ಉಳಿಸಿ ಬೆಳೆಸುವ ಇಲಾಖೆ ಕಾರ್ಯಕ್ಕೆ ಅಳಿಲು ಸೇವೆ ಸಲ್ಲುವಂತಾಗಲಿ ಎಂದು ಆಶಿಸಿದರು. 
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಾಡವಳ್ಳಿ  ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಕರಿಯಪ್ಪ ನಾಯ್ಕ, “ಪಾಲಿಸಿದರೆ ಪಾಲು” ಎಂಬ ಧ್ಯೇಯ ವಾಕ್ಯ ಹೊಂದಿರುವ ಗ್ರಾಮ ಅರಣ್ಯ ಸಮಿತಿಗೆ ಗುರುತರರವಾದ ಜವಾಬ್ದಾರಿಯಿದೆ. ನೂರಾರು ಹೆಕ್ಟರ್‌ಗಳ ಕಾಡು, ವನ್ಯ ಜೀವಿಗಳು ಮತ್ತು ಜೀವ ವೈವಿದ್ಯತೆಗಳ ರಕ್ಷಣೆ ಬೆರಳಣಿಕೆಯ ಸಿಬ್ಬಂಂದಿಗಳಿಂದ ರಕ್ಷಣೆ ಅಸಾಧ್ಯವಾಗಿದೆ. ಸದಸ್ಯರು ನಾಗರೀಕರಲ್ಲಿ ಪ್ರಜ್ಞೆ ಮೂಡಿಸಿ ಕಾಡು ರಕ್ಷಣೆ ಜೊತೆಗೆ ಅರಣ್ಯ ಬೆಳೆದು ಲಾಭಾಂಶದಲ್ಲಿ ಪಾಲು ಪಡೆದುಕೊಳ್ಳುವಂತೆ ತಿಳಿಸಿದರು. 
ವೇದಿಕೆಯಲ್ಲಿ ಉಪ-ವಲಯಾರಣ್ಯಾಧಿಕಾರಿ ಜಯಂತ ಕಾಂಚ್ರೀಕರ, ಗ್ರಾಮ ಪಂಚಾಯತ ಲೆಕ್ಕ ಸಹಾಯಕ ವಾಸು ಬಿ., ಅರಣ್ಯ ಇಲಾಖೆಯ ರಾಮ ನಾಯ್ಕ, ಗ್ರಾಮಸ್ಥರ ಪರವಾಗಿ ಗಜಾನನ ಭಟ್ ಮಾತನಾಡಿದರು. 
ಅರಣ್ಯ ರಕ್ಷಕ ಮೃತ್ಯುಂಜಯ  ಸ್ವಾಗತಿಸಿ ಕೊನೆಯಲ್ಲಿ  ವಂದಿಸಿದರು. 


 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...