ಭಟ್ಕಳ: ಜೆ.ಸಿ.ಐ ಶಿರೂರು ಪ್ರಾಯೋಜಕತ್ವದ ನೂತನ ಭಟ್ಕಳ ಸಿಟಿ ಘಟಕದ ಉದ್ಘಾಟನಾ ಕಾರ್ಯಕ್ರಮ ಭಟ್ಕಳ ತೆಂಗಿನಗುಂಡಿ ಕೋಲಾ ಮುಜಾಫರ್ ರೇಸಾರ್ಟ್ನಲ್ಲಿ ನಡೆಯಿತು.
ಜೇಸಿ ವಲಯ 15ರ ವಲಯಾಧ್ಯಕ್ಷ ಸಂತೋಷ.ಜಿ ನೂತನ ಘಟಕವನ್ನು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿ ಜೆಸಿಐ ಸಂಸ್ಥೆ ಕ್ರಿಯಾಶೀಲ ಯುವಕರ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವೇದಿಕೆಯಾಗಿದೆ.ಈಗಾಗಲೇ ಜಾಗತಿಕ ಮಟ್ಟದ ಬ್ರಹತ್ ಆಂದೋಲನಾ ಸೇರಿದಂತೆ ಜೇಸಿ ಸಂಸ್ಥೆ ಭಾರತ ದೇಶದ ಅಭಿವೃದ್ದಿ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.ಪರಿಸರ, ಆರೋಗ್ಯ,ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಜೇಸಿ ಅಪಾರವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಉದ್ಯಮಿ ಈಶ್ವರ ನಾಯ್ಕ ಜೆಸಿಐ ಸಂಸ್ಥೆ ಸಮಾಜದ ಅಭಿವೃದ್ದಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.ವ್ಯಕ್ತಿತ್ವ ಅಭಿವೃದ್ದಿಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಇದರ ಕೊಡುಗೆ ಶ್ಲಾಘನೀಯ. ಉತ್ತರ ಕನ್ನಡದಲ್ಲಿ ಘಟಕ ಸ್ಥಾಪನೆಯಾಗಿರುವುದು ಸಂತಸ ನೀಡಿದೆ ಎಂದರು.
ಟಿ.ಎಮ್.ಸಿ ಅಧ್ಯಕ್ಷ ಮೊಹ್ಮದ್ ಸಾದಿಕ್ ಮಟ್ಟಾ ಮಾತನಾಡಿ ಭಟ್ಕಳದಲ್ಲಿ ಜೇಸಿ ಘಟಕ ಸ್ಥಾಪನೆಯಾಗುವ ಮೂಲಕ ಇಲ್ಲಿನ ಅಭಿವೃದ್ದಿಗೆ ಇನ್ನಷ್ಟು ಶಕ್ತಿ ಬಂದಿದೆ.ಆರೋಗ್ಯ,ಸ್ವಚ್ಚತೆ ಸೇರಿದಂತೆ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.
ಈ ಸಂಧರ್ಭದಲ್ಲಿ ಭಟ್ಕಳ ಘಟಕದ ಅಧ್ಯಕ್ಷರಾದ ನಾಗರಾಜ್ ಶೇಟ್ರವರಿಗೆ ಹಾಗೂ ಕಾರ್ಯದರ್ಶಿ ನಾಗರಾಜ್ ಮೊಗೇರ ಹಾಗೂ ಇತರ ಪದಾದಿಕಾರಿಗಳಿಗೆ, ಸದಸ್ಯರಿಗೆ ಪದಪ್ರಧಾನ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಪುನೀತ್ ವೆಂಕಟೇಶ ಗೊಂಡ ಹಾಗೂ ಶ್ವೇತಾ.ಜಿ.ಶೇಟ್ರವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ, ವಲಯಾದಿಕಾರಿ ನಿತೀನ್ ಅವಭ್ರತ್, ಮರಿಯಪ್ಪ, ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್, ಜೆ.ಸಿ.ಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್, ನಿಕಟಪೂರ್ವಾಧ್ಯಕ್ಷ ಹರೀಶ್ ಶೇಟ್, ಪ್ರಸಾದ ಪ್ರಭು, ಜೂನಿಯರ್ ಜೇಸಿ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು. ಪ್ರಕಾಶ ಮಾಕೋಡಿ ಸ್ವಾಗತಿಸಿದರು. ಪಾಂಡುರಂಗ ಅಳ್ವೆಗದ್ದೆ ನೂತನ ಅಧ್ಯಕ್ಷರನ್ನು ಪರಿಚಯಿಸಿದರು.ಭಟ್ಕಳ ಸಿಟಿ ಜೆಸಿಐ ಕಾರ್ಯದರ್ಶಿ ನಾಗರಾಜ್ ಮೊಗೇರ್ ವಂದಿಸಿದರು.