ಭಟ್ಕಳ: ಅಂತರಾಷ್ಟ್ರೀಯ ಸ್ವಚ್ಚತಾ ದಿನಾಚರಣೆಯ ಅಂಗವಾಗಿ ಕರಾವಳಿ ಸಂರಕ್ಷಣ ಪಡೆ ಹಾಗೂ ಶ್ರೀದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ಅಳ್ವೆಕೋಡಿಯ ಸಹಯೋಗದಲ್ಲಿ ಸಮುದ್ರ ಕಿನಾರೆಯ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಸಂರಕ್ಷಣಾ ಪಡೆಯ ಅಧಿಕಾರಿ ಸುರೇಶ್ ನಾಯಕ, ಪ್ರೌಢಶಾಲಾ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ, ದುರ್ಗಾಪರಮೇಶ್ವರಿ ಮಂದಿರದ ವ್ಯವಸ್ಥಾಪಕ ರಾಜು ಮೊಗೇರ್ ಸೇರಿದಂತೆ ಹಲವರು ಉಪಸ್ಥಿದ್ದರು.