ಭಟ್ಕಳ: ಇಲ್ಲಿನ ಅಮಿತಾಕ್ಷ ಯೋಗಭವನದಲ್ಲಿ ಸಮುದಾಯ ಅಭಿವೃದ್ದಿ ಯೋಜನೆಯಡಿ ವಯರ್ ನಿಟ್ಟಿಂಗ್,ಹೊಲಿಗೆ,ಉಲ್ಲನ್,ಬ್ಯುಟಿಷಿಯನ್ ತರಬೇತಿ ಪಡೆದು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆರ್ಎನ್ಎಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಂ.ವಿ ಹೆಗಡೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಅಮಿತಾಕ್ಷ ಯೋಗ ಕೇಂದ್ರದ ಮುಖ್ಯಸ್ಥ ಡಾ.ಪಾಂಡುರಂಗ ನಾಯಕ, ಮಹಿಳೆಯರು ಮೊದಲು ಒತ್ತಡದಿಂದ ಹೊರಬಂದ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು. ಸಂಯೋಜನಾಧಿಕಾರಿ ಕೆ.ಮರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ತರಬೇತಿ ಶಿಕ್ಷಕಿ ಕವಿತಾ ಕುಡಗುಂಟಿಕರ್, ಶಾಂತಿ ನಾಯ್ಕ, ಶೈಲಜಾ ಉಪಸ್ಥಿತರಿದ್ದರು. ಉಮಾಶ್ರೀ ಭಟ್ ಅನಿಸಿಕೆ ವ್ಯಕ್ತಪಡಿಸಿದರು. ಗಾಯತ್ರಿ ಕೆ.ಹೆಗಡೆ ಪ್ರಾರ್ಥಿಸಿದರು. ಒಲಿಂಡಾ ಗೋಮ್ಸ್ ಸ್ವಾಗತಿಸಿ, ನಿರೂಪಿಸಿದರು. ಪ್ರಕಾಶ ಜೆ.ಸಿ ವಂದಿಸಿದರು.