ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎಸ್ಸಿ. ದ್ವಿತೀಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇ% ೯೨% ಫಲಿತಾಂಶ ದಾಖಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆಗೆ ಹಾಜರಾದ ೧೨ ವಿದ್ಯಾರ್ಥಿಗಳಲ್ಲಿ ೧೧ ವಿದ್ಯಾರ್ಧಿಗಳು ಉತ್ತೀರ್ಣರಾಗಿದ್ದಾರೆ. ೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ೫ ವಿದ್ಯಾರ್ಧಿಗಳು ಪ್ರಧಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.
ಸದರಿ ಪರೀಕ್ಷೆಯಲ್ಲಿ ಕು.ಅಶ್ವಿನಿ. ಜಿ. ಪೈ , PCM ವಿಭಾಗದಲ್ಲಿ ೯೮.೨೨%, ಕು.ಲಾವಣ್ಯ. ಕೆ. ಮೊಗೇರ ೯೬.೨೨%, ಕು.ನಾಗರತ್ನ ಮೊಗೇರ ೮೯.೩೩%, ಕು.ಹರ್ಷಿತಾ ನಾಯ್ಕ ೮೮.೦೦%, ಕು.ಅಶ್ವಿನಿ ಎಂ. ನಾಯ್ಕ ೮೪.೦೦% ಪಡೆದಿರುತ್ತಾರೆ.
ಕು.ಜಗದೀಶ ನಾಯ್ಕ PMCS ವಿಭಾಗದಲ್ಲಿ ೮೬.೦೦% ಪಡೆದಿರುತ್ತಾನೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.