ಭಟ್ಕಳ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ವೇದಿಕೆ ಜನನಿ 2018 ರ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮ ಉದ್ಘಾಟಿಸಿ ಆರ್. ಎನ್. ಎಸ್ ಪಾಲಿಟೆಕ್ನಿಕ್ನ ಉಪ ಪ್ರಾಚಾರ್ಯ ಕೆ. ಮರಿಸ್ವಾಮಿ ಮಾತನಾಡುತ್ತ ಕನ್ನಡ ಬಹು ಪ್ರಾಚೀನ ಭಾಷೆ, ಕನ್ನಡಕ್ಕೆ 2000 ವರ್ಷಗಳ ಇತಿಹಾಸ ಇದೆ. 12ನೆ ಶತಮಾನದಲ್ಲಿ ಬಸವಣ್ಣ ಮತ್ತು ಇತರ ರಾಜ್ಯದಿಂದ ಬಂದ ವಚನಕಾರರು ತಮ್ಮ ಅಭಿವ್ಯಕ್ತಿಗೆ ಕನ್ನಡವನ್ನೇ ಬಳಸಿ ಕನ್ನಡ ಸತ್ವವನ್ನು ವಚನಗಳ ಮೂಲಕ ಮೊದಲು ತೋರಿಸಿಕೊಟ್ಟರು .
ಕರ್ನಾಟಕದಲ್ಲಿ ಒಂದು ಸರ್ವೆ ಪ್ರಕಾರ 7 ಲಕ್ಷ ಕೈಗಾರಿಕೆಗಳಿವೆ ಪ್ರತಿಯೊಂದು ಕಂಪನಿಯಲ್ಲಿ ಕನಿಷ್ಠ 3 ರಿಂದ 5 ಜನ ಕನ್ನಡಿಗರಿಗೆ ಕೆಲಸ ಕೊಟ್ಟರೆ 21ರಿಂದ 35 ಲಕ್ಷ ಕನ್ನಡಿಗರಿಗೆ ಉದ್ಯೋಗ ದೋರಕುತ್ತದೆ. ಉದ್ಯಮಿಗಳು ಕನ್ನಡಿಗರಿಗೆ ಕೆಲಸ ನೀಡುವ ಮನಸ್ಸು ಮಾಡಬೇಕು. ಕನ್ನಡಿಗರು ಹೆಚ್ಚು ವೃತ್ತಿ ಕೌಶಲ್ಯತೆ ಹೊಂದಿದಾಗ ಸುಲಭವಾಗಿ ಉದ್ಯೋಗ ಪಡೆಯಬಹುದೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಎ.ಬಾವಿಕಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಈ ಕನ್ನಡ ವೇದಿಕೆಗೆ ನಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಅತಿಥಿ ಸಂಸ್ಥೆಯ ಉಪ ಪ್ರಾಚಾರ್ಯರಾದ ಎಚ್.ಎಮ್. ಪಾಲಚಂದ್ರ ರವರು ಕನ್ನಡ ನಾಡುನುಡಿಯ ಬಗ್ಗೆ ಮಾತನಾಡಿದರು.
ಕನ್ನಡ ವೇದಿಕೆ ಸಂಚಾಲಕರಾದ ಡಾ. ಪದ್ಮಯ್ಯ ನಾಯ್ಕ ಮಾತನಾಡುತ್ತ ಈ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ವೇದಿಕೆ ಮೂಲಕ ಕನ್ನಡದ ಕಂಪನ್ನು ಪಸರಿಸುವಂತೆ ಹಾಗೂ ಜನನಿ ಬಗ್ಗೆ ಜಾಗೃತಿ ಮೂಡಿಸಿದರು.
ಗೌರಿ ಬಲಸೆ ಮತ್ತು ಭೂಮಿಕಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿಲಾಸ ನಾಯ್ಕ ವಂದಿಸಿದರು. ಇದೆ ಸಂದರ್ಭದಲ್ಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೇಡಲಾಯಿತು.