ಭಟ್ಕಳ : ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ದ್ವಿತೀಯ ಸೆಮೆಸ್ಟರ್ ಬಿ.ಕಾಂ. ಪರೀಕ್ಷೆಯಲ್ಲಿ ಇಲ್ಲಿನ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಬಂಡಿ ಶೇ. 87.86 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನವನ್ನು, ಭರತ ಗೊಂಡ ಶೇ. 87.14 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ನಾಗರಾಜ ನಾಯ್ಕ್ ಶೇ. 86.57 ಅಂಕದೊಂದಿಗೆ ತೃತೀಯ ಸ್ಥನವನ್ನು ಪಡೆದಿರುತ್ತಾರೆ.
ಫೈನಾನ್ಶಿಯಲ್ ಅಕೌಂಟಿಂಗ್ ವಿಷಯದಲ್ಲಿ ಮತ್ತು ಫಂಡಮೆಂಟಲ್ಸ್ ಆಫ್ ಕಂಪ್ಯೂಟರ್ಸ ವಿಷಯದಲ್ಲಿ 5 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ|| ಸುರೇಶ ವಿ. ನಾಯಕ್, ಪ್ರಾಂಶುಪಾಲರಾದ ನಾಗೇಶ್ ಎಮ್ ಭಟ್, ಬಿ.ಕಾಂ. ಸಂಯೋಜಕ ಶ್ರೀ ಫಣಿಯಪ್ಪಯ್ಯ ಹೆಬ್ಬಾರ್, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಹರ್ಷ ವ್ಯಕ್ತಪಡಿಸಿರುತ್ತಾರೆ.