ಕಾರವಾರ: ಅಂಕೋಲಾ ಕಾರವಾರ ಜೆ.ಡಿ.ಎಸ್. ಪಕ್ಷದ ವತಿಯಿಂದ ಕಾರವಾರದ ಜೆ.ಡಿ.ಎಸ್. ಕಛೇರಿಯಲ್ಲಿ ರಾಜ್ಯ ಮಾಜಿ ಮುಖ್ಯ ಮಂತ್ರಿ, ಬಡವರ ಪಾಲಿಗೆ ಕಣ್ಮಣಿಯರಾದ ದಿ. ಎಸ್. ಬಂಗಾರಪ್ಪನವರ ೮೪ನೇ ಹುಟ್ಟು ಹಬ್ಬದ ಜಯಂತಿಯನ್ನು ಆಚರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪುರುಷೋತ್ತ ಸಾವಂತ ದಿ. ಎಸ್. ಬಂಗಾರಪ್ಪನವರು ಉತ್ತರ ಕನ್ನಡ ಜಿಲ್ಲೆಗೆ ಅತೀ ಜನಪ್ರಿಯ ನಾಯಕರಾಗಿದ್ದರು. ಅವರು ರಾಜ್ಯದ ಮುಖ್ಯಮಂತ್ರಿ ಆದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳಾದ ಆಶ್ರಯ ಮನೆ, ಅಕ್ಷಯ ಯೋಜನೆ, ಆರಾಧನಾ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃಪಾಂಕ ಯೋಜನೆ ಮತ್ತು ಗ್ರಾಮೀಣ ಕುಶಲ ಕಾರ್ಮಿಕರ ಏಳ್ಗೆಗಾಗಿ ವಿಶ್ವ ಯೋಜನೆ ಅಂಥಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿ ಇಡೀ ಕರ್ನಾಟಕ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು. ಅಲ್ಲದೇ ನಮ್ಮ ಕಾರವಾರ ತಾಲೂಕಿನಲ್ಲಿ ಖಾರ್ಗೆಜೂಗಕ್ಕೆ ಡಿಂಗಿ (ಯಾಂತ್ರಿಕ ದೋಣಿ) ಯನ್ನು ಕೊಟ್ಟು ಇನ್ನೂವರೆಗೆ ಬಂಗಾರಪ್ಪರವರ ಹೆಸರಿನಲ್ಲಿ ಚಲಿಸುತ್ತಿದೆ ಎಂದು ಸ್ಮರಿಸಿದರು.
ಅಂಕೋಲಾ ತಾಲೂಕ ಅಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಬಂಗಾರಪ್ಪನವರು ನಮ್ಮ ಜಿಲ್ಲೆಯ ಅಳಿಯರಾಗಿದ್ದು ಜೀವನದುದ್ದಕ್ಕೂ ರೈತ ಹೋರಾಟ, ಜನಪರ ಹೋರಾಟ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲುಗುಂಡಿದ್ದು ಎಲ್ಲರ ಮೆಚ್ಚಿನ ಜನನಾಯಕರಾಗಿದ್ದರು ಎಂದು ತಿಳಿಸಿದರು. ಜೆ.ಡಿ.ಎಸ್. ಮುಖಂಡ ಪ್ರದೀಪ ಶೇಜವಾಡಕರ ಮಾತನಾಡಿ ಬಂಗಾರಪ್ಪನವರು ಒಬ್ಬ ಬಡವರ ಬಂದು ಎಂದು ಬಣ್ಣಿಸಿದರು. ಅಲ್ಲದೇ ಶೇಜವಾಡದಲ್ಲಿ ಬಡವರಿಗಾಗಿ ಆಶ್ರಯ ಮನೆಗಳನ್ನು ಕಟ್ಟಿಸಿಕೊಟ್ಟು ಈಗಲೂ ಆ ಸ್ಥಳಕ್ಕೆ ಬಂಗಾರಪ್ಪ ನಗರ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಜೆ.ಡಿ.ಎಸ್. ಮುಖಂಡರಾದ ಖಲಿಲುಲ್ಲಾ ಸರ್. ಮತ್ತು ಶಂಕರ ಬುಬ್ರಕರ ವಾಸ್ತವಿಕವಾಗಿ ಭಾಷಣ ಮಾಡಿದರು. ಸಭೆಯಲ್ಲಿ ಮಾರುತಿ ನಾಯ್ಕ ಅಂಕೋಲಾ, ಪುನೀತ ನಾಯ್ಕ, ಅಬ್ದುಲ್ ಖತೀಬ, ಏಕನಾಥ ನಾಯ್ಕ ಅರ್ಗಾ, ತಾಕು ದುರ್ಗೇಕರ, ರಾಜೇಜ ಕೊಡಾರ ಮುಂತಾದವರು ಹಾಜರಿದ್ದರು.