ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಗೈದ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆಗೈದ ಬಿಜೆಪಿ ನಾಯಕರು
ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದಕ್ಕೆ ಹಾಡುಹಗಲೇ ಇಬ್ಬರು ಪೊಲೀಸ್ ಪೇದೆಗಳನ್ನು ಬಿಜೆಪಿ ನಾಯಕರು ಅಟ್ಟಾಡಿಸಿ ಹಲ್ಲೆ ಮಾಡಿದ ಘಟನೆ ಸೋಮವಾರ ಬೆಂಗಳೂರಿನ ವರ್ತೂರು ಮುಖ್ಯ ರಸ್ತೆಯ ಸಿದ್ದಾಪುರ ಬಳಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಪೊಲೀಸರನ್ನು ವೈಟ್ ಫೀಲ್ಡ್ ಠಾಣೆಯ ಬಸಪ್ಪ ಗಾಣೇಗಾರ ಹಾಗೂ ಶರಣ ಬಸಪ್ಪ ಎಂದು ಗುರುತಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆಗೈದ ಘಟನೆಗೆ ಸಂಬಂಧಿಸಿದಂತೆ ವರ್ತ್ತೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದು ಸಿದ್ದಾಪುರ ವಾಸಿಗಳಾದ ಬಿಜೆಪಿಯ ಮುಖಂಡರೆನ್ನಲಾಗಿರುವ ಕುಮಾರ, ಸಂದೀಪ್, ಮೂರ್ತಿ ಮತ್ತು ಮುರಳಿ ಮೋಹನ್ ಎಂಬುವವರೆ ಬಂಧಿತ ಆರೋಪಿಗಳಾಗಿದ್ದಾರೆ.