ಬೆಂಗಳೂರು: ಉದ್ಯಮಿಪುತ್ರನನ್ನು ಅಪಹರಿಸಿ ಬಳಿಕ ದಾರಿಪಾಲು ಮಾಡಿದ ಐವರ ಬಂಧನ

Source: so english | By Arshad Koppa | Published on 31st August 2016, 8:17 AM | State News | Incidents |

ಬೆಂಗಳೂರು, ಆ ೩೧: ಕೊಂಚ ಕಾಲ ಕಿರುತೆರೆಯಲ್ಲಿಯೂ ಕೆಲಸ ಮಾಡಿದ ನಟನ ಸಹಿತ ಐವರು ವ್ಯಕ್ತಿಗಳನ್ನು ಪೋಲೀಸರು ಅಪಹರಣ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ. ಕಳೆದ ವಾರ ಖ್ಯಾತ ಉದ್ಯಮಿ ವಿಜಯ್ ಕಿರ್ಲೋಸ್ಕರ್ ರವರ ಹದಿಹರೆಯದ ಪುತ್ರ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ-ಇಶಾನ್ ಬಾಪಟ್ ನನ್ನು ಹಣಕ್ಕಾಗಿ ಅಪಹರಿಸಿ ಬಳಿಕ ದಾರಿಪಾಲು ಮಾಡಿಬಿಟ್ಟ ಆರೋಪ ಹೊರಿಸಿ ಈ ಐವರನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಕಮೀಶನರ್ ಎನ್.ಎಸ್ ಮೇಘಾರಿಕ್ ರವರು ತಿಳಿಸಿದ್ದಾರೆ. 

ಈ ಐವರನ್ನು ಮುನಿಯಪ್ಪ, ೨೯, ಹಸನ್ ಡೋಂಗ್ರಿ ೨೬, ಜಗದೀಶ್, ೩೨, ಜಗನ್ನಾಥ ೧೯, ಮತ್ತು ಮನೋಜ್ ೧೯ ಎಂದು ಗುರುತಿಸಲಾಗಿದೆ. ಐವರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಬಳಿಕ ವಿಚಾರಣೆಗಾಗಿ ಪೋಲೀಸ್ ಠಾಣೆಯಲ್ಲಿ ಬಂಧನದಲ್ಲಿರಿಸಲಾಗಿದೆ. 

ಬಾಪಟ್ ರನ್ನು ಈ ತಂಡ ಆಗಸ್ಟ್ ೨೩ ರಂದು ಆಹಾರ ಮಳಿಗೆಯೊಂದರ ಬಳಿ ಅಪಹರಿಸಿದ್ದರು. ಮರುದಿನ ಪೋಲೀಸರು ಕಾಣೆಯಾದ ಯುವಕನ ಹುಡುಕಾಟವನ್ನು ತೀವ್ರಗೊಳಿಸಿದ್ದರ ಪರಿಣಾಮವಾಗಿ ಹೆದರಿ ಬಂಧನದಿಂದ ಬಿಟ್ಟುಬಿಟ್ಟಿದ್ದರು. ಆದರೆ ಈ ವಿಷಯ ಅರಿಯದ ಅವರ ಸ್ನೇಹಿತೆಯ ಬಳಿ ಬಿಡುಗಡೆಯ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಯಾವುದೇ ಬಿಡುಗಡೆಯ ಹಣ ನೀಡಲಿಲ್ಲ ಎಂದು ತಿಳಿದುಬಂದಿದೆ. 

ಈ ಐವರಲ್ಲಿ ಮುನಿಯಪ್ಪ ಕನ್ನಡ ಚಿತ್ರ ನಟನಾಗಿದ್ದು ಚಾಲೆಂಜರ್ ಚಿತ್ರದ ಚಿತ್ರೀಕರಣದ ವೇಳೆ ಹಸನ್ ಡೋಂಗ್ರಿಯವರ ಪರಿಚಯವಾಗಿತ್ತು. ಈತನಿಗೆ ಚಿತ್ರ ನಿರ್ಮಿಸಲು ಹಣ ಬೇಕಾಗಿದ್ದು ಅಪಹರಣ ಮೂಲಕ ಈ ಹಣ ಹೊಂದಿಸಲು ಹಂಚಿಕೆ ಹೂಡಲಾಗಿತ್ತು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...