@ಪರ್ವಾಝ ರಹ್ಮಾನಿ
ಉತ್ತರ ಪ್ರದೇಶದ ಲಿಖೀಂಪುರ ಖೇರಿ ಜಿಲ್ಲೆಯ ವರದಿ. ಅಲ್ಲಿನ ಗ್ರಾಮಗಳ ಮತ್ತು ಹಳ್ಳಿಗಳ ರೈತರು ಉಂಡಾಡಿ ಜಾನುವಾರುಗಳಿಂದ ಕಂಗಾಲಾಗಿದ್ದಾರೆ. ಈ ಜಾನುವಾರುಗಳನ್ನು ಏನು ಮಾಡುವುದೆಂದು ತೋಚದಾಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಈ ಜಾನುವಾರುಗಳಿಗೆ ಒಂದು ಆಶ್ರಯ ತಾಣ ಮಾಡಿಕೊಡಬೇಕೆಂದು ರೈತರು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಈ ಜಾನುವಾರುಗಳಲ್ಲಿ ಬಹುತೇಕ ಗೋವುಗಳಾಗಿವೆ. ಕೊನೆಗೆ ಅವರು ಪರಸ್ಪರ ಸಮಾಲೋಚನೆ ನಡೆಸಿ ಈ ಜಾನುವಾರುಗಳನ್ನು ವಾಕಾ ಬ್ಲಾಕ್ನ ಒಂದು ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಕೂಡಿ ಹಾಕುವುದೆಂದು ತೀರ್ಮಾನಿಸಿದರು. ಹಾಗೆ ಸುಮಾರು ನೂರು ಮಂದಿ ರೈತರು 150 ದನಗಳನ್ನು ಶಾಲೆಗೆ ಕೊಂಡು ಹೋಗಿ ಅಲ್ಲಿನ ಅಧ್ಯಾಪಕರು ಮತ್ತು ಮಕ್ಕಳೊಂದಿಗೆ ನೀವೆಲ್ಲ ನಿಮ್ಮ ನಿಮ್ಮ ಮನೆಗೆ ಹೋಗಿರಿ. ಇನ್ನು ಈ ದನಗಳೇ ಇಲ್ಲಿರುವುವು ಎಂದು ಹೇಳಿದರು. ಈ ಶಾಲೆ ಯಾವಾಗ ತೆರೆಯುವುದು, ಯಾವಾಗ ಪಾಠ ಆರಂಭವಾಗುವುದು, ಶಾಲೆಯಲ್ಲಿ ದನಗಳನ್ನು ನೋಡಿಕೊಳ್ಳುವವರು ಯಾರು ಎಂದು ಯಾರಿಗೂ ತಿಳಿದಿಲ್ಲ. ರೈತರು ಹೇಳುವಂತೆ, ಈ ಜಾನುವಾರು ಗಳು ಅವರಿಗೊಂದು ತಲೆಬೇನೆಯಾಗಿದೆ. ಸಿಕ್ಕ ಸಿಕ್ಕ ಹೊಲಗಳಿಗೆ ಅವು ನುಗ್ಗಿ ಮೇಯುತ್ತಿವೆ. ಜನವಾಸ ಕೇಂದ್ರಗಳಿಗೂ ನುಗ್ಗುತ್ತಿವೆ. ಸ್ವಾರಸ್ಯಕರ ವೇನೆಂದರೆ ಶಾಲೆಗೆ ಹೋಗುವ ರೈತರೊಂದಿಗೆ ಕೆಲವು ವಿದ್ಯಾರ್ಥಿಗಳ ಹೆತ್ತವರೂ ರೈತರಿಗೆ ಬೆಂಬಲವಾಗಿ ಹೋಗಿದ್ದಾರೆ. ಟೈಮ್ಸ್ ಆಫ್ ಇಂಡಿಯದ ಆಗಸ್ಟ್ 30ರ ವರದಿಯಂತೆ, ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮುಂಚೆಯೂ ಆಗಿವೆ. ಅಲ್ಲಿನ ಜನರು ಜಾನು ವಾರುಗಳ ಕಾಟದಿಂದ ಬೇಸತ್ತು ಅವುಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಿ ಹಾಕಿದ್ದಾರೆ.
ಲಿಖೀಂಪುರದ ರೈತರಿಗೆ ಮಾಡಿದ್ದು ಸರಿಯೆ. ಆದರೆ ಇನ್ನೊಂದು ಕೆಲಸವೂ ಆಗಬಹುದಿತ್ತು. ಅದು ಅವರ ಗಮನಕ್ಕೆ ಬಂದಿರಲಿಲ್ಲ. ಅದು ಈಗಲೂ ಆಗಬಹುದು. ಗೋಪೂಜಕರು ಮತ್ತು ಗೋರಕ್ಷಕರು ಬಂದು ಗೋವುಗಳ ಪೈಕಿ ಒಂದೊಂದೋ, ಎರಡೆರಡೋ ಗೋವುಗಳನ್ನು ಕೊಂಡು ಹೋಗಿ ತಂತಮ್ಮ ಮನೆಗಳಲ್ಲಿ ಆರೈಕೆ ಮಾಡಲಿ ಎಂದು ಆಗ್ರಹಿಸಬೇಕಿತ್ತು. ಈ ಕಾರ್ಯವು ಇಡೀ ದೇಶದಲ್ಲಿ ನಡೆಯಬೇಕು. ಗ್ರಾಮ ಗ್ರಾಮ ಗಳಲ್ಲೂ ದೆಹಲಿ, ಕಲ್ಕತ್ತದಂತಹ ನಗರಗಳಲ್ಲಿಯೂ ನಡೆಯಬೇಕು.
ಈ ಉಂಡಾಡಿ ಹಾಗೂ ಅಸಹಾಯಕ ಜಾನುವಾರುಗಳ ಕಾಟ ದೊಡ್ಡ ನಗರ ಗಳಲ್ಲೂ ಕಡಿಮೆಯೇನಲ್ಲ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇವುಗಳ ದಂಡೇ ಕುಳಿತಿರುತ್ತವೆ. ಕೆಲವು ಪ್ರದೇಶಗಳ ಹೆದ್ದಾರಿ ಮತ್ತು ಪೇಟೆಗಳಲ್ಲಿ ಇವು ಕಂಡು ಬರುತ್ತವೆ. ಹಸಿವು ಬಾಯಾರಿಕೆ ಯಿಂದ ಕಂಗಾಲಾದ ಸ್ಥಿತಿಗಳಲ್ಲಿ! ಅನೇಕ ಜಾನುವಾರುಗಳ ಚರ್ಮಗಳು ಮೂಳೆಗೆ ಅಂಟಿಕೊಂಡಿರುತ್ತವೆ. ತ್ಯಾಜ್ಯ ಗಳ ರಾಶಿಯಲ್ಲಿ ಬಾಯಿ ಹಾಕಿ ಸಿಕ್ಕಿದ್ದನ್ನು ತಿಂದು ಹಾಕುತ್ತವೆ. ಬಹಳಷ್ಟು ಜಾನುವಾರುಗಳು ಸತ್ತು ಹೋಗುತ್ತವೆ. ಅಲ್ಲಿ ಅವುಗಳ ಪೂಜಕರೂ ಇರುವು ದಿಲ್ಲ. ರಕ್ಷಕರೂ ಇರುವುದಿಲ್ಲ. ಹತ್ತಿರ ದಿಂದ ಸಾಗುವ ದಾರಿಹೋಕರಲ್ಲಿ ಈ ದನಗಳ ಬಗ್ಗೆ ಅನುಕಂಪವೂ ಗೋಚರಿ
ಸುತ್ತಿಲ್ಲ. ಈ ನಿರಾಶ್ರಿತ ದನಗಳನ್ನು ನಗರ ಪ್ರದೇಶಗಳಲ್ಲಿ ಯಾರಾದರೂ ಪ್ರೇಮ ಹಾಗೂ ಭಕ್ತಿಯೊಂದಿಗೆ ತಮ್ಮ ಜೊತೆಗೆ
ಕರೆದೊಯ್ಯುವುದೂ ಕಾಣುತ್ತಿಲ್ಲ.
ಗೋವುಗಳೊಂದಿಗೆ ಈ ದುರ್ವ ರ್ತನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಸರಕಾರಿ ಆಶ್ರಯತಾಣ ಮತ್ತು ಗೋ ಶಾಲೆಗಳಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಗೋರಕ್ಷಣೆಯ ಹೆಸರಲ್ಲಿ ಜನರು ಸರಕಾರದಿಂದ ಭಾರೀ ಹಣವನ್ನು ಪಡೆಯುತ್ತಾರೆ. ಬಹಳಷ್ಟನ್ನು ತಾವೇ ಕಬಳಿಸುತ್ತಾರೆ. ಸ್ಪಲ್ಪಂಶ ಈ ಬಡ ಪ್ರಾಣಿಗಳಿಗೆ ಖರ್ಚು ಮಾಡುತ್ತಾರೆ. ಈ ಕೆಲಸವನ್ನು ಸ್ವಯಂ ಆಡಳಿತ ಪಕ್ಷದ ಜನರೇ ಮಾಡುತ್ತಾರೆ. ಮಧ್ಯ ಪ್ರದೇಶ, ಛತ್ತೀಸ್ಗಡ್ ಮತ್ತು ರಾಜಸ್ತಾನದ ಗೋ ಶಾಲೆಗಳಲ್ಲಿ ಗೋವುಗಳು ಸಾಯುತ್ತಿವೆ. ಆದರೆ ವಿಷಯ ಆಡಳಿತ ಪಕ್ಷದವರದಲ್ಲವೇ? ಆದ್ದರಿಂದ ಮಾಧ್ಯಮಗಳು ಈ ಪ್ರಕರಣಗಳನ್ನು ಸರಿಯಾಗಿ ಎತ್ತುತ್ತಿಲ್ಲ. ದಾರಿಗಳಲ್ಲಿ, ಪೇಟೆಗಳಲ್ಲಿ ಹಾಗೂ ರೈಲು ಗಾಡಿಗಳಲ್ಲಿ ಗೂಂಡಾಗಿರಿ ಮಾಡುವ ಗೋರಕ್ಷಕರೂ ಇವರನ್ನೇನೂ ಮಾಡುವುದಿಲ್ಲ. [ಅಸಹಾಯಕ ಗೋವುಗಳ ರಕ್ಷಣೆ ಮತ್ತು ಆರೈಕೆಗೆ ಸರಕಾರವು ಪ್ರಾಯೋಗಿಕ ಯೋಜನೆ ರೂಪಿಸಬೇಕು. ನಮ್ಮ ದೃಷ್ಟಿಯಲ್ಲಿ ಮೇನಕಾ ಗಾಂಧಿಯವರ ಸಚಿವಾಲಯವು ಈ ಕಾರ್ಯವನ್ನು ಮಾಡಬಲ್ಲುದು. ಟಿ.ವಿ. ಮತ್ತು ವಾರ್ತಾ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ, ಈ ಗೋವುಗಳನ್ನು ತಮ್ಮ ಮನೆಗೊಯ್ಯುವಂತೆ ಗೋ ಪೂಜಕರು ಮತ್ತು ಗೋರಕ್ಷಕರಿಗೆ ಪ್ರೇರಣೆ ನೀಡಬೇಕು.] ವಾಸ್ತವದಲ್ಲಿ ಇಂದು ಕಾಣು ತ್ತಿರುವ ಗೋ ಭಕ್ತಿ ಮತ್ತು ಗೋ ಪ್ರೇಮದ ಬಿರುಗಾಳಿಯ ಹಿನ್ನಲೆಯಲ್ಲಿ ಪೇಟೆಗಳಲ್ಲೂ ಬೀದಿಗಳಲ್ಲೂ ಒಂದೇ ಒಂದು ನಿರಾಶ್ರಿತ ಗೋವು ಕಾಣಬಾರ ದಿತ್ತು. ಈಗೆಲ್ಲಿದ್ದಾರೆ ಗೋವಿನ ಹೆಸರಲ್ಲಿ ಮಾನವರನ್ನು ಕಡಿಯುವ ಗೋರಕ್ಷಕರು!
ಕೃಪೆ: ದಅವತ್ ಅನು: ಸನ್ಮಾರ್ಗ ವಾರಪತ್ರಿಕ