ಗೋ ರಕ್ಷಕರೆಲ್ಲಿ?

Source: sonews | By Staff Correspondent | Published on 28th September 2017, 8:24 PM | Coastal News | National News | Special Report | Public Voice | Don't Miss |

@ಪರ್ವಾಝ ರಹ್ಮಾನಿ

ಉತ್ತರ ಪ್ರದೇಶದ ಲಿಖೀಂಪುರ ಖೇರಿ ಜಿಲ್ಲೆಯ ವರದಿ. ಅಲ್ಲಿನ ಗ್ರಾಮಗಳ ಮತ್ತು ಹಳ್ಳಿಗಳ ರೈತರು ಉಂಡಾಡಿ ಜಾನುವಾರುಗಳಿಂದ ಕಂಗಾಲಾಗಿದ್ದಾರೆ. ಈ ಜಾನುವಾರುಗಳನ್ನು ಏನು ಮಾಡುವುದೆಂದು ತೋಚದಾಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಈ ಜಾನುವಾರುಗಳಿಗೆ ಒಂದು ಆಶ್ರಯ ತಾಣ ಮಾಡಿಕೊಡಬೇಕೆಂದು ರೈತರು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಈ ಜಾನುವಾರುಗಳಲ್ಲಿ ಬಹುತೇಕ ಗೋವುಗಳಾಗಿವೆ. ಕೊನೆಗೆ ಅವರು ಪರಸ್ಪರ ಸಮಾಲೋಚನೆ ನಡೆಸಿ ಈ ಜಾನುವಾರುಗಳನ್ನು ವಾಕಾ ಬ್ಲಾಕ್‍ನ ಒಂದು ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಕೂಡಿ ಹಾಕುವುದೆಂದು ತೀರ್ಮಾನಿಸಿದರು. ಹಾಗೆ ಸುಮಾರು ನೂರು ಮಂದಿ ರೈತರು 150 ದನಗಳನ್ನು ಶಾಲೆಗೆ ಕೊಂಡು ಹೋಗಿ ಅಲ್ಲಿನ ಅಧ್ಯಾಪಕರು ಮತ್ತು ಮಕ್ಕಳೊಂದಿಗೆ ನೀವೆಲ್ಲ ನಿಮ್ಮ ನಿಮ್ಮ ಮನೆಗೆ ಹೋಗಿರಿ. ಇನ್ನು ಈ ದನಗಳೇ ಇಲ್ಲಿರುವುವು ಎಂದು ಹೇಳಿದರು. ಈ ಶಾಲೆ ಯಾವಾಗ ತೆರೆಯುವುದು, ಯಾವಾಗ ಪಾಠ ಆರಂಭವಾಗುವುದು, ಶಾಲೆಯಲ್ಲಿ ದನಗಳನ್ನು ನೋಡಿಕೊಳ್ಳುವವರು ಯಾರು ಎಂದು ಯಾರಿಗೂ ತಿಳಿದಿಲ್ಲ. ರೈತರು ಹೇಳುವಂತೆ, ಈ ಜಾನುವಾರು ಗಳು ಅವರಿಗೊಂದು ತಲೆಬೇನೆಯಾಗಿದೆ. ಸಿಕ್ಕ ಸಿಕ್ಕ ಹೊಲಗಳಿಗೆ ಅವು ನುಗ್ಗಿ ಮೇಯುತ್ತಿವೆ. ಜನವಾಸ ಕೇಂದ್ರಗಳಿಗೂ ನುಗ್ಗುತ್ತಿವೆ. ಸ್ವಾರಸ್ಯಕರ ವೇನೆಂದರೆ ಶಾಲೆಗೆ ಹೋಗುವ ರೈತರೊಂದಿಗೆ ಕೆಲವು ವಿದ್ಯಾರ್ಥಿಗಳ ಹೆತ್ತವರೂ ರೈತರಿಗೆ ಬೆಂಬಲವಾಗಿ ಹೋಗಿದ್ದಾರೆ. ಟೈಮ್ಸ್ ಆಫ್ ಇಂಡಿಯದ ಆಗಸ್ಟ್ 30ರ ವರದಿಯಂತೆ, ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮುಂಚೆಯೂ ಆಗಿವೆ. ಅಲ್ಲಿನ ಜನರು ಜಾನು ವಾರುಗಳ ಕಾಟದಿಂದ ಬೇಸತ್ತು ಅವುಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಿ ಹಾಕಿದ್ದಾರೆ.
ಲಿಖೀಂಪುರದ ರೈತರಿಗೆ ಮಾಡಿದ್ದು ಸರಿಯೆ. ಆದರೆ ಇನ್ನೊಂದು ಕೆಲಸವೂ ಆಗಬಹುದಿತ್ತು. ಅದು ಅವರ ಗಮನಕ್ಕೆ ಬಂದಿರಲಿಲ್ಲ. ಅದು ಈಗಲೂ ಆಗಬಹುದು. ಗೋಪೂಜಕರು ಮತ್ತು ಗೋರಕ್ಷಕರು ಬಂದು ಗೋವುಗಳ ಪೈಕಿ ಒಂದೊಂದೋ, ಎರಡೆರಡೋ ಗೋವುಗಳನ್ನು ಕೊಂಡು ಹೋಗಿ ತಂತಮ್ಮ ಮನೆಗಳಲ್ಲಿ ಆರೈಕೆ ಮಾಡಲಿ ಎಂದು ಆಗ್ರಹಿಸಬೇಕಿತ್ತು. ಈ ಕಾರ್ಯವು ಇಡೀ ದೇಶದಲ್ಲಿ ನಡೆಯಬೇಕು. ಗ್ರಾಮ ಗ್ರಾಮ ಗಳಲ್ಲೂ ದೆಹಲಿ, ಕಲ್ಕತ್ತದಂತಹ ನಗರಗಳಲ್ಲಿಯೂ ನಡೆಯಬೇಕು.
ಈ ಉಂಡಾಡಿ ಹಾಗೂ ಅಸಹಾಯಕ ಜಾನುವಾರುಗಳ ಕಾಟ ದೊಡ್ಡ ನಗರ ಗಳಲ್ಲೂ ಕಡಿಮೆಯೇನಲ್ಲ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇವುಗಳ ದಂಡೇ ಕುಳಿತಿರುತ್ತವೆ. ಕೆಲವು ಪ್ರದೇಶಗಳ ಹೆದ್ದಾರಿ ಮತ್ತು ಪೇಟೆಗಳಲ್ಲಿ ಇವು ಕಂಡು ಬರುತ್ತವೆ. ಹಸಿವು ಬಾಯಾರಿಕೆ ಯಿಂದ ಕಂಗಾಲಾದ ಸ್ಥಿತಿಗಳಲ್ಲಿ! ಅನೇಕ ಜಾನುವಾರುಗಳ ಚರ್ಮಗಳು ಮೂಳೆಗೆ ಅಂಟಿಕೊಂಡಿರುತ್ತವೆ. ತ್ಯಾಜ್ಯ ಗಳ ರಾಶಿಯಲ್ಲಿ ಬಾಯಿ ಹಾಕಿ ಸಿಕ್ಕಿದ್ದನ್ನು ತಿಂದು ಹಾಕುತ್ತವೆ. ಬಹಳಷ್ಟು ಜಾನುವಾರುಗಳು ಸತ್ತು ಹೋಗುತ್ತವೆ. ಅಲ್ಲಿ ಅವುಗಳ ಪೂಜಕರೂ ಇರುವು ದಿಲ್ಲ. ರಕ್ಷಕರೂ ಇರುವುದಿಲ್ಲ. ಹತ್ತಿರ ದಿಂದ ಸಾಗುವ ದಾರಿಹೋಕರಲ್ಲಿ ಈ ದನಗಳ ಬಗ್ಗೆ ಅನುಕಂಪವೂ ಗೋಚರಿ
ಸುತ್ತಿಲ್ಲ. ಈ ನಿರಾಶ್ರಿತ ದನಗಳನ್ನು ನಗರ ಪ್ರದೇಶಗಳಲ್ಲಿ ಯಾರಾದರೂ ಪ್ರೇಮ ಹಾಗೂ ಭಕ್ತಿಯೊಂದಿಗೆ ತಮ್ಮ ಜೊತೆಗೆ
ಕರೆದೊಯ್ಯುವುದೂ ಕಾಣುತ್ತಿಲ್ಲ.
ಗೋವುಗಳೊಂದಿಗೆ ಈ ದುರ್ವ ರ್ತನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಸರಕಾರಿ ಆಶ್ರಯತಾಣ ಮತ್ತು ಗೋ ಶಾಲೆಗಳಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಗೋರಕ್ಷಣೆಯ ಹೆಸರಲ್ಲಿ ಜನರು ಸರಕಾರದಿಂದ ಭಾರೀ ಹಣವನ್ನು ಪಡೆಯುತ್ತಾರೆ. ಬಹಳಷ್ಟನ್ನು ತಾವೇ ಕಬಳಿಸುತ್ತಾರೆ. ಸ್ಪಲ್ಪಂಶ ಈ ಬಡ ಪ್ರಾಣಿಗಳಿಗೆ ಖರ್ಚು ಮಾಡುತ್ತಾರೆ. ಈ ಕೆಲಸವನ್ನು ಸ್ವಯಂ ಆಡಳಿತ ಪಕ್ಷದ ಜನರೇ ಮಾಡುತ್ತಾರೆ. ಮಧ್ಯ ಪ್ರದೇಶ, ಛತ್ತೀಸ್ಗಡ್ ಮತ್ತು ರಾಜಸ್ತಾನದ ಗೋ ಶಾಲೆಗಳಲ್ಲಿ ಗೋವುಗಳು ಸಾಯುತ್ತಿವೆ. ಆದರೆ ವಿಷಯ ಆಡಳಿತ ಪಕ್ಷದವರದಲ್ಲವೇ? ಆದ್ದರಿಂದ ಮಾಧ್ಯಮಗಳು ಈ ಪ್ರಕರಣಗಳನ್ನು ಸರಿಯಾಗಿ ಎತ್ತುತ್ತಿಲ್ಲ. ದಾರಿಗಳಲ್ಲಿ, ಪೇಟೆಗಳಲ್ಲಿ ಹಾಗೂ ರೈಲು ಗಾಡಿಗಳಲ್ಲಿ ಗೂಂಡಾಗಿರಿ ಮಾಡುವ ಗೋರಕ್ಷಕರೂ ಇವರನ್ನೇನೂ ಮಾಡುವುದಿಲ್ಲ. [ಅಸಹಾಯಕ ಗೋವುಗಳ ರಕ್ಷಣೆ ಮತ್ತು ಆರೈಕೆಗೆ ಸರಕಾರವು ಪ್ರಾಯೋಗಿಕ ಯೋಜನೆ ರೂಪಿಸಬೇಕು. ನಮ್ಮ ದೃಷ್ಟಿಯಲ್ಲಿ ಮೇನಕಾ ಗಾಂಧಿಯವರ ಸಚಿವಾಲಯವು ಈ ಕಾರ್ಯವನ್ನು ಮಾಡಬಲ್ಲುದು. ಟಿ.ವಿ. ಮತ್ತು ವಾರ್ತಾ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ, ಈ ಗೋವುಗಳನ್ನು ತಮ್ಮ ಮನೆಗೊಯ್ಯುವಂತೆ ಗೋ ಪೂಜಕರು ಮತ್ತು ಗೋರಕ್ಷಕರಿಗೆ ಪ್ರೇರಣೆ ನೀಡಬೇಕು.] ವಾಸ್ತವದಲ್ಲಿ ಇಂದು ಕಾಣು ತ್ತಿರುವ ಗೋ ಭಕ್ತಿ ಮತ್ತು ಗೋ ಪ್ರೇಮದ ಬಿರುಗಾಳಿಯ ಹಿನ್ನಲೆಯಲ್ಲಿ ಪೇಟೆಗಳಲ್ಲೂ ಬೀದಿಗಳಲ್ಲೂ ಒಂದೇ ಒಂದು ನಿರಾಶ್ರಿತ ಗೋವು ಕಾಣಬಾರ ದಿತ್ತು. ಈಗೆಲ್ಲಿದ್ದಾರೆ ಗೋವಿನ ಹೆಸರಲ್ಲಿ ಮಾನವರನ್ನು ಕಡಿಯುವ ಗೋರಕ್ಷಕರು!
ಕೃಪೆ: ದಅವತ್  ಅನು: ಸನ್ಮಾರ್ಗ ವಾರಪತ್ರಿಕ

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...