ರೈಲ್ವೆಹಳಿಗಳು ಸಾರ್ವಜನಿಕರಿಗೆ ಒಳಿತನ್ನು ಮಾಡುತ್ತಿವೆಯೇ?

Source: sonews | By Staff Correspondent | Published on 29th October 2018, 11:19 PM | State News | National News | Special Report | Incidents | Don't Miss |

ಮನುಷ್ಯರ ಆತಂಕ ಮತ್ತು ಆವೇಶಗಳು ಸಾರ್ವಜನಿಕ ಮತ್ತು ಖಾಸಗಿ ಸ್ಥಳಾವಕಾಶಗ ನಡುವೆ ಸಂಘರ್ಷವನ್ನು ಹುಟ್ಟುಹಾಕುತ್ತಿದೆ.

ರೈಲ್ವೆ ದುರಂತಗಳ ಬಗ್ಗೆ ನಡೆಯುವ ಚರ್ಚೆಗಳು ಬಹಳಷ್ಟು ಸಾರಿ ಪರಸ್ಪರರನ್ನು ಹೀಗೆಳೆಯುತ್ತಾ ಅವಾಸ್ತವಿಕ ನೆಲೆಯನ್ನು  ಪ್ರವೇಶಿಸಿಬಿಡುತ್ತವೆ. ಅಕ್ಟೋಬರ್ ೧೯ರಂದು ಅಮೃತ್ಸರ್ ಬಳಿ ೬೦ ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ದುರಂತದ ಬಗ್ಗೆಯೂ ಆಸಕ್ತ ಗುಂಪುಗಳು ಅದೇ ಬಗೆಯ ಪರಸ್ಪರ ಬಯ್ಯಾಟಗಳಲ್ಲಿ ತೊಡಗಿಕೊಂಡಿವೆ. ದುರಂತವನ್ನು ತಡೆಯಲು ಏನೆಲ್ಲಾ ಮಾಡಬಹುದಾಗಿತ್ತೆಂಬ ಬಗ್ಗೆ ಹಲವಾರು ಪ್ರತಿಪಾದನೆಗಳು ಮತ್ತು ಹೇಳಿಕೆಗಳೂ ಸಹ ಹೊರಬಿದ್ದಿವೆ. ಒಂದು ವೇಳೆ ರೈಲಿನ ಮೋಟಾರ್ಮ್ಯಾನ್ ಇಂಜಿನನ್ನು ಸ್ವಲ್ಪ ನಿಧಾನಗೊಳಿಸಿದ್ದರೆ ಅಥವಾ ರೈಲ್ವೆ ಪೊಲೀಸರು ಇನ್ನೂ ಸ್ವಲ್ಪ ಜಾಗರೂಕರಾಗಿದ್ದರೆ ದುರಂತ ತಡೆಯಬಹುದಿತ್ತು ಅನ್ನುವುದರಿಂದ ಮೊದಲುಗೊಂಡು ದಸರಾ ಉತ್ಸಾಹಿಗಳು ರೈಲ್ವೆ ಹಳಿಯನ್ನು ಆತುಕೊಳ್ಳದೆ ಸ್ವಲ್ಪ ದೂರ ಕಾಯ್ದುಕೊಂಡಿದ್ದರೆ ದುರಂತವನ್ನು ತಡೆಯಬಹುದಿತ್ತು ಅನ್ನುವವರೆಗೆ ವಾದಗಳು ಹರಡಿಕೊಂಡಿವೆ. ವಾದಗಳು ಕ್ರಮೇಣ ಎಂಥಾ ಅಸಂಬಧ್ಹ ಮಟ್ಟವನ್ನು ಮುಟ್ಟಿದೆವೆಂದರೆ ದಸರಾ ಉತ್ಸಾಹಿಗಳು ರೈಲ್ವೆ ಹಳಿಯ ಮೇಲೆ ಮೈಮರೆತು ಸ್ವಂತಿ (ಸೆಲ್ಫಿ) ತೆಗೆದುಕೊಂಡಿದ್ದು ಕೂಡಾ ದುರಂತಕ್ಕೆ ಕಾರuವೆಂಬಂತೆ ವಾದಿಸಲಾಗುತ್ತಿದೆ. ಅದೇ ರೀತಿ ಒಂದು ರಾಜಕೀಯ ಪಕ್ಷವೊಂದಕ್ಕೆ ಸೇರಿದ ಗಣ್ಯರು ಉತ್ಸವದಲ್ಲಿ ಭಾಗವಹಿಸಲು ಹೋಗದೇ ಇದ್ದಿದ್ದರೆ ಸಂದರ್ಭ ಭಿನ್ನವಾಗಿರುತ್ತೆಂಬ ಹೇಳಿಕೆಯನ್ನು ತೇಲಿಬಿಡಲಾಗುತ್ತಿದೆ. .

ಅವಾಸ್ತವಿಕ ಪ್ರತಿಪಾದನೆಗಳು ಬೇರೆಯವರ ಮೇಲೆ ಗೂಬೆ ಹೊರಿಸುವುದಕ್ಕೆ ಬೇಕಾದ ಭೂಮಿಕೆಯನ್ನು ಒದಗಿಸುತ್ತಾ ತನ್ನ ಹೊಣೆಗಾರಿಕೆಯನ್ನು ಮರೆಮಾಚಿಸುತ್ತದೆ. ಪರಸ್ಪg ಮೂದಲಿಕೆಗಳ ಆಟವನ್ನು ಜವಾಬ್ದಾರಿಯೆಂಬ ಹೆಸರಿನಲ್ಲಿ ನಡೆಸಲಾಗುತ್ತಿದೆ ಮಾತ್ರವಲ್ಲದೆ  ಇದರಲ್ಲಿ ಸಾಕಷ್ಟು ರಾಜಕೀಯವೂ ಸೇರಿಕೊಂಡಿದೆ.

ಆದರೆ ಕೇಳಲೇ ಬೇಕಿರುವ ಪ್ರಶ್ನೆಯೇನೆಂದರೆ :ತಮ್ಮ ಹತ್ತಿರದ ಭೂಮಿಯ ಮೇಲೆ ಹಾಕಲ್ಪಟ್ಟಿರುವ ರೈಲ್ವೆ ಹಳಿಗಳ ಬಗ್ಗೆ ಅಥವಾ ರೈಲ್ವೆ ಹಳಿಗಳ ಆಸುಪಾಸಿನ ರೈಲ್ವೆ ಭೂಮಿಯ ಬಗ್ಗೆ  ಸಾರ್ವಜನಿಕರ ಗ್ರಹಿಕೆ ಏನಿದೆ? ರೈಲ್ವೆ ಹಳಿಯ ಸಮೀಪ ಇರುವ ಭೂಮಿಯನ್ನು ಜನರು ಏಕೆ ಆಗಾಗ ಅಥವಾ ಖಾಯಮ್ಮಾಗಿ ಆಕ್ರಮಿಸಿಕೊಳ್ಳುತ್ತಾರೆ? ರೈಲ್ವೆಹಳಿಗಳ ಜೊತೆ ಸಾರ್ವಜನಿಕರ ಮುಖಾಮುಖಿಯ ಪರಿಣಾಮಗಳೇನು?

ರೈಲ್ವೆ ಹಳಿಗಳ ಮತ್ತು ಅದರ ಸಮೀಪದ ನಡುವಿನ ಭೌತಿಕ ಸಂಬಂಧದ ಬಗ್ಗೆ ಸಾಹಿತ್ಯದಲ್ಲಿ ಮತ್ತು ವಸಾಹತೋತ್ತರ ಬರಹಗಳಲ್ಲಿ ಒಂದು ನಿರಂತರವಾದ ಸಂಘರ್ಷಮಯ ಸಂಬಂಧವೇ ಕಂಡುಬರುತ್ತದೆ. ಗಾಂಧೀವಾದದಿಂದ ಪ್ರಭಾವಿತಗೊಂಡಿರುವ ಕೆಲವು ಹೆಸರಾಂತ ಬರಹಗಾರರಂತೂ ಹಳ್ಳಿಗಾಡಿನ ಭೂಮಿಯನ್ನು ಬೇಧಿಸಿಕೊಂಡು ಹೋಗುವ ರೈಲ್ವೆ ಹಳಿಗಳು ಗ್ರಾಮಸ್ಥರ ಹೃದಯಗಳಲ್ಲೂ ಅಷ್ಟೇ ದೊಡ್ಡದಾದ ಗಾಯಗಳನ್ನು ಮಾಡಿವೆ ಎಂದು ಭಾವಿಸುತ್ತಾರೆ. ಬೆಟ್ಟಗುಡ್ಡಗಳನ್ನು ಕಡಿದು ನಿರ್ಮಿಸಲಾದ ರೈಲ್ವೆ ಹಳಿಗಳಿಗೆ ಸಾಮ್ರಾಜ್ಯಶಾಹಿ ಪ್ರಭುತ್ವವೇ ಹೊಣೆಗಾರನೆಂದು ವಸಾಹತೋತ್ತರ ಬರಹಗಾರರು ಸಹಜವಾಗಿಯೇ ಪ್ರತಿಪಾದಿಸುತ್ತಾರೆ. ಸಾರ್ವಜನಿಕ ಒಳಿತಿಗಾಗಿ ನಿರ್ಮಿಸಲ್ಪಟ್ಟವೆಂದು ನಂಬಲಾಗಿರುವ ರೈಲ್ವೆ ಹಳಿಗಳು ಮತ್ತು ರೈಲುಗಳು ಹಿಂದೆ ರೈತಾಪಿಗೆ ಸೇರಿದ್ದ ಖಾಸಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದವು. ರೈಲ್ವೆ ಹಳಿಗಳ ಬಳಿ ಇರುವ ಜಮೀನು ಮಿಲಿಟರಿ ಜಮೀನಿನಂತಲ್ಲ. ಅವು ಸಾರ್ವಜನಿಕ ಜಮೀನಾಗಿವೆ. ಹೀಗಾಗಿ ಸಾರ್ವಜನಿಕ ಭೂಮಿಯು ವಸತಿಗೆ ಅಥವಾ ಉತ್ಸವಗಳಿಗೆ ಗ್ರಾಮಸ್ಥರಿಗೆ ದೊರೆಯುತ್ತದೆ. ಕೆಲವು ಸಣ್ಣ ಪಟ್ಟಣಗಳಲ್ಲಿ ಹಾಗೂ ದೊಡ್ಡ ಹಳ್ಳಿಗಳಲ್ಲಿ ಜಮೀನಿನಲ್ಲಿ ದಸರಾ ಉತ್ಸವಗಳು ಸಾಂಪ್ರದಾಯಿಕವಾಗಿಯೇ ನಡೆದುಕೊಂಡು ಬಂದಿದೆ.

ಹೀಗಾಗಿ ಭಾರತದ ಜನ ರೈಲ್ವೆ ಹಳಿಗಳ ಪಕ್ಕದಲ್ಲಿರುವ ಜಮೀನನ್ನು ತಾತ್ಕಾಲಿಕವಾಗಿಯೋ ಖಾಯಮ್ಮಾಗಿಯೋ ಆಕ್ರಮಿಸಿಕೊಳ್ಳುವುದು ತಮ್ಮ ಸಾಂಪ್ರಾದಾಯಿಕ ಹಕ್ಕೆಂದೇ ಪರಿಗಣಿಸಿದ್ದಾರೆ. ಒಂದೋ ಖಾಯಮ್ ವಸತಿಗಾಗಿ ಅಥವಾ ತಾತ್ಕಾಲಿಕ ಉತ್ಸವಗಳಿಗಾಗಿ. ಭೂಮಿಯನ್ನು ಆಕ್ರಮಿಸಿಕೊಂಡಿರುವ ಜನರ ಬಗ್ಗೆ ರೈಲ್ವೆ ಆಡಳಿತವು ಉದಾರಿಯಾಗಿಲ್ಲದಿದ್ದರೂ ಮಿಲಿಟರಿಗೆ ಹೋಲಿಸಿದಲ್ಲಿ ಸ್ವಲ್ಪ ಬಿಟ್ಟುಕೊಡುವ ಧೋರಣೆಯನ್ನು ಅನುಸರಿಸುತ್ತದೆ.

ಮುಂಬೈನಲ್ಲಿ ಸಮಯಕ್ಕೆ ಸರಿಯಾಗಿ ಕೆಲಸದ ಜಗವನ್ನು ಸೇರಿಕೊಳ್ಳುವ ತವಕದಲ್ಲಿರುವ ಮುಂಬೈ ರೈಲ್ವೆ ಪ್ರಯಾಣಿಕರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಸಮಯಕ್ಕೆ ಸರಿಯಾಗಿ ಸೇರಬೇಕೆಂಬ ಅವರ ಆತಂಕವು ರೈಲ್ವೆ ಟ್ರಾಕನ್ನು ಹಾದುಹೋಗುವ ರೈಲುಗಳ ವೇಗದ ಬಗ್ಗೆ ಗಮನವನ್ನೇ ನೀಡದಂತೆ ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಕಾರಣದಿಂದಾಗಿ ಮುಂಬೈನಲ್ಲಿ ೨೦,೦೦೦ ಜನ ಮರಣಹೊಂದಿರುವುದಲ್ಲದೆ ಅಷ್ಟೇ ಸಂಖ್ಯೆ ಜನರಿಗೆ ಮಾರಣಾಂತಿಕ ಗಾಯಗಳಾಗಿವೆಂದು ಮಾಧ್ಯಮದ ವರದಿಗಳು ಹೇಳುತ್ತವೆ. ಮತ್ತೊಂದು ಕಡೆ ಇದೇ ರೈಲುಗಳು ಮಧ್ಯಮ ವರ್ಗದ ಪ್ರಯಾಣಿಕ್ರನ್ನು ಕರೆದೊಯ್ಯುತ್ತವೆ. ರೈಲ್ವೆ ಹಳಿಗಳ ಪಕ್ಕದ ಭೂಮಿಯಲ್ಲಿ ವಸತಿ ಮಾಡಿಕೊಂಡಿರುವ ಬಡವರ್ಗಗಳ ಬಗ್ಗೆ ಜನರ ಧೋರಣೆ ನೈತಿಕವಾಗಿ ತಲೆತಗ್ಗಿಸುವಂತಿರುತ್ತದೆ. ಪ್ರಯಾಣಿಕರು ರೈಲ್ವೆ ಪ್ರಯಾಣದ ಕಷ್ಟಗಳನ್ನು ಅನುಭವಿಸುತ್ತಿದ್ದರೂ ರೈಲ್ವೆ ಹಳಿಗಳ ಪಕ್ಕದಲ್ಲಿರುವ ಸ್ಲಮ್ಮುಗಳೇ ತಮ್ಮ ಅನುದಿನದ ಬೇಸರ ಮತ್ತು ಹತಾಷೆಗಳಿಗೆ ಕಾರಣವೆಂದು ಭಾವಿಸುತ್ತಾರೆ.

ಅದೇನೇ ಇದ್ದರೂ, ರೈಲ್ವೆ ಹಳಿಗಳು ಮತ್ತು ಮನುಷ್ಯರ ನಡುವೆ ಏರ್ಪಟ್ಟಿರುವ ಸಂಘರ್ಶದ ಹಿನ್ನೆಲೆಯಲ್ಲಿ ಜನರು ತಮಗೆ ಅನಾಹುತ ಕಾದಿದ್ದರೂ ಗಡಿ ದಾಟಿ ರೈಲ್ವೆ ಹಳಿಗಳನ್ನು ಏರಿ ಕೂರುವ ತೀರ್ಮಾನಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳುವುದಿಲ್ಲ ಎಂದು ವಾದಿಸಬಹುದೇ? ವಾಸ್ತವವಾಗಿ ಅವರು ವಾಸಿಸುವ ಪ್ರದೇಶ ಮತ್ತು ಅವರು ಕೆಲಸ ಮಾಡುವ ಪರಿಸ್ಥಿತಿಗಳು ಹುಟ್ಟುಹಾಕುವ ಆತಂಕಗಳು ರಿಸ್ಕು ತೆಗೆದುಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ರೈಲುಗಳು ಕೂಡಾ ತಮ್ಮಂತೇ ತಾವೇ ಹಳಿ ಬಿಟ್ಟು ಮನುಷ್ಯರನ್ನು ಕೊಲ್ಲಲು ಧಾವಿಸುವುದಿಲ್ಲ ಅಥವಾ ವಸತಿ ಪ್ರದೇಶಗಳಿಗೆ ನುಗ್ಗಿ ಬಿಡುವುದಿಲ್ಲ ಅಥವಾ ಹಳಿಗಳ ಮೇಲೆ ಕೂತಿರುವ ಗುಂಪನ್ನೇ ಗುರಿ ಮಾಡಿ ಹೊರಟಿರುವುದಿಲ್ಲ. ರೈಲ್ವೆ ಹಳಿಗಳು ವೈಜ್ನಾನಿಕ ತರ್ಕದ ಆಧಾರದ ಮೇಲೆ ನಡೆದರೆ ಮನುಷ್ಯರ ತರ್ಕವು ಕೆಲವೊಮ್ಮೆ ಆತಂಕ ಮತ್ತು ಆವೇಶಗಳ ಅಧೀನವಾಗಿರುತ್ತವೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...